ಶಿರಸಿಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು
ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಪಕ್ಕದಲ್ಲಿ ನಿಂತದ್ದ ಮಹಿಳೆ ಸಾವು
ಹೊನ್ನಾವರ: ಕರ್ಕಿ ಚೆನ್ನಕೇಶವ ದೇವಾಲಯದ ಸಮೀಪ ಹೊನ್ನಾವರದಿಂದ ಕುಮುಟಾ ಕಡೆಗೆ ಅತಿವೇಗದಿಂದ ಚಲಾಯಿಸಿಕೊಂಡ ಬಂದ ಕಾರು ರಸ್ತೆಯ ಎಡಬಾಗದಲ್ಲಿ ನುಗ್ಗಿಸಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಪಾರ್ವತಿ ನಾರಾಯಣ ನಾಯ್ಕ (60) ಎನ್ನುವವರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮಹಿಳೆಯ ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ಗಂಭೀರವಾಗಿ ಗಾಯವಾದ ಹಿನ್ನಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಮೃತಪಟ್ಟಿದ್ದಾರೆ. ಈ ಸಂಭದ ಬೆಳಗಾವಿಯ ಹುಕ್ಕೆರಿಯ ಕಾರು ಚಾಲಕ ಮಂಜುನಾಥ ಶಿವಪ್ಪ ಅಮಾತಿ ವಿರುದ್ದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಸಿ: ನೂತವಾಗಿ ನಿರ್ಮಿಸಿದ ರಸ್ತೆಗೆ ನೀರು ಹಾಕಲು ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ರಸ್ತೆಗೆ ನೀರು ಹಾಕಲು ತೆರಳುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ದಿಬ್ಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅತಿವೇಗದಿಂದ ಟ್ರ್ಯಾಕ್ಟರ್ ಚಲಾಯಿಸಿದ್ದೆ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಹೊನ್ನಾವರ ಮತ್ತು ಶಿರಸಿ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ತನ್ನ ಮೊಬೈಲ್ ಸ್ವಿಚ್ ಆಫ್ ಇದೆ ಎಂದು ಹೇಳಿ ಬೇರೆಯವರ ಮೊಬೈಲಿಂದ ಕರೆ ಮಾಡಿದ ಯುವಕ ನಾಪತ್ತೆ
- ತಡರಾತ್ರಿ ಮನೆಗೆ ಆಗಮಿಸಿದ ನಾಗರಹಾವು : ಬುಸ್ ಗುಡುವ ಶಬ್ಬ ಕೇಳಿ ಮನೆಯವರು ಎಚ್ಚರ
- ನಾನೇನು ದನ ಕಾಯಲು ಇಲ್ಲಿಗೆ ಬಂದಿದ್ದೇನಾ? ದೇಶಪಾಂಡೆ ಗರಂ ಆಗಿದ್ದೇಕೆ?
- ಅಡಿಕೆ ಬೆಳೆಗಾರರಿಗೆ ಮತ್ತೊಂದು ಆತಂಕ: ಭೀತಿ ಹುಟ್ಟಿಸಿದ ಚೈನೀಸ್ ವೈರಸ್!
- ರಾಜ್ಯಮಟ್ಟದ ಚದುರಂಗ ಸ್ಪರ್ಧೆ: ಸಿಂಚನಾ ಭಟ್ ರಾಷ್ಟ್ರಮಟ್ಟಕ್ಕೆ ಆಯ್ಕೆ