Follow Us On

WhatsApp Group
ಮಾಹಿತಿ
Trending

ವೆಂಕಟೇಶನ ಪಾದ ಸೇರಿದ ಬಾಸಗೋಡದ ಲಕ್ಷ್ಮೀ

ಅಂಕೋಲಾ : ಬಾಸಗೋಡ ಗ್ರಾಮದ ಹಿರಿಯರಲ್ಲಿ ಓರ್ವರಾಗಿದ್ದ ಲಕ್ಷ್ಮೀ ವೆಂಕಟೇಶ ನಾಯಕ(87)ಮಂಗಳವಾರ ಬೆಳಗಿನ ಜಾವ ಸ್ವಗೃಹದಲ್ಲಿ ವಿಧಿವಶರಾದರು. ಭಾವಿಕೇರಿಯ ರಾಮ ಮತ್ತು ದೇವಮ್ಮ ದಂಪತಿಗಳ ಮಗಳಾಗಿದ್ದ ಲಕ್ಷ್ಮೀ ಇವರು ಬಾಸಗೋಡದ ವೆಂಕಟೇಶ ನಾಯಕ ಇವರನ್ನು ವಿವಾಹವಾಗಿದ್ದರು. ಸರಿ ಸುಮಾರು ತಮ್ಮ 30ರ ಎಳೆಯ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಿದ್ದ ದುಃಖದ ನಡುವೆಯೇ ಈ ಮಹಿಳೆ ಕಷ್ಟಪಟ್ಟು ತನ್ನ ನಾಲ್ವರು ಮಕ್ಕಳಿಗೆ ಉತ್ತಮ ಶಿಕ್ಷಣ- ಸಂಸ್ಕಾರ ನೀಡಿ ಮಹಾ ತಾಯಿ ಎನಿಸಿದ್ದರು. ಕೃಷಿ ಮತ್ತು ಹೈನುಗಾರಿಕೆ ಮೂಲಕ ಸದಾ ದುಡಿಯುತ್ತಿದ್ದ ಈ ಮಹಿಳೆ ತಮ್ಮ ಇಳಿಯ ವಯಸ್ಸಿನಲ್ಲಿಯೂ ಲವಲವಿಕೆಯಿಂದ ಸ್ವಾಭಿಮಾನಿ ಬದುಕು ಸಾಗಿಸಿ ಎಲ್ಲರಿಗೂ ಮಾದರಿಯಾಗಿದ್ದರು.

ಕುಟುಂಬದ ಮತ್ತು ಊರಿನ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಲಕ್ಷ್ಮೀ ನಾಯಕ, ಕಿರಿಯರಿಗೆ ಅಚ್ಚವ್ವಿಯಾಗಿ, ಉಳಿದವರಿಗೆ ಅಚ್ಚಕ್ಕ, ಲಕ್ಷ್ಮಕ್ಕನಾಗಿ ಪ್ರೀತಿಯನ್ನು ಧಾರೆಯೆರೆದಿದ್ದರು. ಸದಾ ನಗುಮುಖದಿಂದ ಆತ್ಮೀಯರನ್ನು ಕರೆದು ಗೌರವಿಸುವ ಮತ್ತು ಪ್ರೀತಿ ಉಣಬಡಿಸುವ ಇವರ ಮಮತೆ ಮತ್ತು ವಾತ್ಸಲ್ಯ ಇನ್ನು ನೆನಪು ಮಾತ್ರ ಎಂಬoತಾಗಿದೆ.

ಎದ್ದು-ಹೊದ್ದು ಚಿರ ನಿದ್ದೆಗೆ ಜಾರಿದ ಮನೆಯೊಡತಿ: ಎಂದಿನoತೆ ರಾತ್ರಿ ವೇಳೆ ಮಲಗಿದ್ದ ಲಕ್ಷ್ಮೀ ನಾಯಕ ಮಂಗಳವಾರ ಮುಂಜಾನೆ 5 ರ ಸುಮಾರಿಗೆ ಎದ್ದು ಶೌಚಕ್ಕೆ ತೆರಳುವ ವೇಳೆ ಮಗ ಬಾಲಚಂದ್ರ ಮತ್ತು ಸೊಸೆ ರೋಹಿಣೆಯನ್ನು ಎಬ್ಬಿಸಿ, ತನ್ನ ಮುಖದರ್ಶನ ನೀಡಿ, ಶೌಚ ಮುಗಿಸಿ ಬಂದು ಪುನಃ ಹೊದಿಕೆ ಹೊದ್ದು ಹಾಸಿಗೆಯ ಮೇಲೆ ಮಲಗಿದವಳು ಕೆಲವೇ ಕ್ಷಣಗಳಲ್ಲಿ ಚಿರ ನಿದ್ದೆಗೆ ಜಾರಿದ್ದಾಳೆ.

ಮೃತರ ಓರ್ವ ಮಗ ನಾರಾಯಣ ವಿಜಯಬ್ಯಾಂಕನಲ್ಲಿ ಮ್ಯಾನೆಜರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಇನ್ನೋರ್ವ ಮಗ ಬಾಲಚಂದ್ರ(ಬಾಬು) ವಿಜಯಬ್ಯಾಂಕನಲ್ಲಿ ಹಿರಿಯ ಪಿಗ್ಮಿ ಸಂಗ್ರಹಕಾರರಾಗಿ ಮತ್ತು ಕೃಷಿ ಹೈನುಗಾರಿಕೆ ನಡೆಸಿ ಚಿರಪರಿಚಿತರಾಗಿದ್ದಾರೆ. ಹೆಣ್ಣು ಮಕ್ಕಳಾದ ವಿಠೋಬಾಯಿ ಮತ್ತು ಗೀತಾ ಸರ್ಕಾರಿ ನೌಕರಿ ಸಲ್ಲಿಸಿ ತುಂಬು ಕುಟುಂಬದ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಮೃತರು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

Back to top button