Follow Us On

WhatsApp Group
Uttara Kannada
Trending

ಆರ್. ಎನ್. ಎನ್. ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಹೆಬ್ಬಾರ | ತಂದೆಯ ಹುಟ್ಟುಹಬ್ಬದ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದ ಮಯೂರ ಅವರ ಬಗ್ಗೆ ಮೆಚ್ಚುಗೆ

ಅಂಕೋಲಾ: ಡಾ. ಕಮಲಾ ಮತ್ತು ಆರ್. ಎನ್. ನಾಯಕ ಹಾಸ್ಪಿಟಲ್ ಗೆ ಶುಕ್ರವಾರ ಸಂಜೆ ವೇಳೆ ಭೇಟಿ ನೀಡಿದ ಸಚಿವ ಶಿವರಾಂ ಹೆಬ್ಬಾರ, ಅಸ್ಪತ್ರೆಯ ಒಳಾವರಣ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಸ್ವಚ್ಚತೆ ಮತ್ತು ಸೇವೆಯೇ ಆಸ್ಪತ್ರೆಯ ಜೀವಾಳ ಎಂಬ ಕಿವಿಮಾತನ್ನು ಹೇಳಿದರು.

ದಿ. ಆರ್ ಎನ್. ನಾಯಕ ಅವರ 65 ನೇ ಹುಟ್ಟು ಹಬ್ಬದ ನಿಮಿತ್ತ ಆಸ್ಪತ್ರೆಯಲ್ಲಿ 2 ದಿನಗಳ ಕಾಲ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಮಾರೋಪ ಸಮಾರಂಭದ ಸರಳ ಕಾಯಕ್ರಮದಲ್ಲಿ ಭಾಗವಹಿಸಿ, ಆರ್. ಎನ್. ನಾಯಕ ಭಾವಚಿತ್ರಕ್ಕೆ ಪುಷ್ಪದಳ ಸಮರ್ಪಿಸಿ ಗೌರವ ಸೂಚಿಸಿದ ಸಚಿವರು, ಬಡ ಜನತೆಗೆ ಅನುಕೂಲ ಕಲ್ಪಿಸುವ ಇನ್ನಷ್ಟು ಜನಪರ ಕಾಳಜಿಯ ಸೇವೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಆಸ್ಪತ್ರೆಯ ಮುಖ್ಯಸ್ಥ ಮಯೂರ್ ಆರ್ ನಾಯಕ, ಮುಖ್ಯ ಆಡಳಿತಧಿಕಾರಿ ಡಾ. ಶೃತಿ ಮಯೂರ ನಾಯಕ ಹಾಗೂ ಕುಟುಂಬವಗ೯ದವರು ಹಾಗೂ ಆಸ್ಪತ್ರೆ ವೈದ್ಯರು,ಸಿಬ್ಬಂದಿಗಳು ಸಚಿವರನ್ನು ಗೌರವ ಪೂರ್ವಕವಾಗಿ ಬರ ಮಾಡಿಕೊಂಡರು.

ಸಚಿವರ ಜೊತೆ ಅತ್ಮೀಯವಾಗಿ ಮಾತನಾಡಿದ ಮಯೂರ್ , ಆಸ್ಪತ್ರೆ ಕಟ್ಟಬೇಕೆಂದಿದ್ದ ತನ್ನ ತಂದೆಯ ಕನಸು ಈ ರೀತಿಯಾಗಿಯಾದರೂ ನನಸಾಗಲು ತಮ್ಮಂಥ ಹಿರಿಯರ ಆಶೀರ್ವಾದ, ಮಾರ್ಗದರ್ಶನ, ಕೆ.ಎಲ್.ಇ ಸಂಸ್ಥೆಯ ಪ್ರಭಾಕರ ಕೋರೆ ಮತ್ತಿತರ ಎಲ್ಲರ ಸಂಪೂರ್ಣ ಸಹಕಾರವೇ ಕಾರಣವಾಗಿದ್ದು, ಮುಂದೆಯೂ ತಾಲೂಕಿನ ಜನತೆ ಮತ್ತು ಸರ್ವರ ಸಹಕಾರ ಬೇಕೆಂದು ಕೋರಿದರು.

ತಹಶೀಲ್ದಾರ ಉದಯ ಕುಂಬಾರ , ಸಿಪಿಐ ಕೃಷ್ಣಾನಂದ ನಾಯಕ, ಪಿ ಎ ಸೈ ಈ ಸಿ ಸಂಪತ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ಮಯೂರ್ ನಾಯಕ ಕುಟುಂಬದ ಹಿತೈಷಿಗಳು, ಆಪ್ತರು, ಸಾರ್ವಜನಿಕ ಪ್ರಮುಖರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button