Uttara Kannada
Trending

ಡಾ. ಎಂ.ಪಿ.ಕರ್ಕಿಯವರಿಗೆ ನುಡಿನಮನ: ಸಾಧನೆಯ ಅವಲೋಕನ

ಹೊನ್ನಾವರ: ಪಟ್ಟಣದ ಪ್ರಭಾತನಗರದ ಮೂಡಗಣಪತಿ ದೇವಸ್ಥಾನ ಸಭಾಭವನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮಾಜಿ ಶಾಸಕ ದಿ. ಡಾ. ಎಂ.ಪಿ.ಕರ್ಕಿಯವರ ನುಡಿನಮನ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮಕ್ಕೆ ಆಗಮಿಸಿದ ಕುಮಟಾದ ಬಿಜೆಪಿ ಧುರೀಣ ಡಾ. ಜಿ.ಜಿ. ಹೆಗಡೆ ಮಾತನಾಡಿ ಡಾ. ಕರ್ಕಿಯವರು ಹಣಕ್ಕೋಸ್ಕರ ಸಮಾಜ ಸೇವೆ ಮಾಡಿದವರಲ್ಲ. ವೈದ್ಯಕೀಯ ವೃತ್ತಿಯನ್ನು ತುಂಬ ಪ್ರೀತಿಯಿಂದ ಮಾಡಿದರು. ಪ್ರಾಕ್ಟೀಸ್ ನಿಲ್ಲಿಸಿದರೂ ಜನಮಾನಸದಲ್ಲಿ ನೆಲೆನಿಂತಿದ್ದರು. ಪಂಡಿತ ದೀನದಯಾಳ ಅವರ ತತ್ವವನ್ನು ಅಕ್ಷರಶಃ ಪಾಲನೆ ಮಾಡಿದವರು. ವಿರೋಧಿಗಳಿಗೂ ಏಕವಚನದಲ್ಲಿ ಮಾತನಾಡಿದವರಲ್ಲ. ಕೆಟ್ಟ ಮಾತನಾಡಿದವರಲ್ಲ ಐವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡಿದ ಶ್ರೇಯಸ್ಸು ಡಾ. ಎಂ.ಪಿ.ಕರ್ಕಿಯವರಿಗೆ ಸಲ್ಲುತ್ತದೆ. 18 ವರ್ಷ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು ಎಂದರು.


ನoತರ ಶಾಸಕ ದಿನಕರ ಶೆಟ್ಟಿ ಮಾತನಾಡಿ ಡಾ. ಎಂ.ಪಿ.ಕರ್ಕಿಯವರು ಬಟ್ಟೆ ತೊಡುವುದರಿಂದ ಹಿಡಿದು ಜೀವನದ ಪ್ರತಿಯೊಂದು ಕಾರ್ಯದಲ್ಲೂ ಶಿಸ್ತನ್ನು ಅಳವಡಿಕೊಂಡಿದ್ದರು. ಪ್ರೀತಿಯಿಂದ, ಆತ್ಮೀಯತೆಯಿಂದ ಮಾತನಾಡಿಸುವ ಗುಣ ಅವರಲ್ಲಿತ್ತು ಎಂದರು. ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ ಪಕ್ಷ ಸಂಘಟನೆಗೆ ಡಾ. ಕರ್ಕಿಯವರ ಕೊಡುಗೆ ಅಪಾರ ಪ್ರಾಮಾಣಿಕರು. ರಾಜಕೀಯ ಕ್ಷೇತ್ರವಲ್ಲದೇ ಶಿಕ್ಷಣ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.


ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ ಡಾ. ಎಂ.ಪಿ.ಕರ್ಕಿಯವರು ದೂರದೃಷ್ಠಿ ಸಹೊಂದಿದ್ದ ಧರೀಣರಾಗಿದ್ದರು. 20 ವರ್ಷಗಳ ಹಿಂದೆಯೇ ಕುಮಟಾದ ಮುಖ್ಯ ಸ್ಥಳದಲ್ಲಿ ಪಕ್ಷದ ಕಾರ್ಯಾಲಯ ಕಟ್ಟಲು ಅಧ್ಯಕ್ಷರ ಹೆಸರಿನಲ್ಲಿ ಮೂರು ಗುಂಟೆ ಜಾಗವನ್ನು ಮಂಜೂರಾತಿ ಮಾಡಿಸಿಟ್ಟಿದಾರೆ. ಆದರೆ ಈ ತನಕ ನಮಗ್ಯಾರಿಗೂ ಕಟ್ಟಡ ಕಟ್ಟಲು ಸಾಧ್ಯವಾಗಿಲ್ಲ ಎಂದರು. ಕೆ.ಜೆ. ಭಟ್ ಕೆಕ್ಕಾರ. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಎಸ್.ಹೆಗಡೆ ಕರ್ಕಿ. ನುಡಿನಮನ ಸಲ್ಲಿಸಿದರು.


ವೇದಿಕೆಯಲ್ಲಿ ಮುಖಂಡರಾದ ಉಮೇಶ ನಾಯ್ಕ, ಗೋವಿಂದ ನಾಯ್ಕ ಭಟ್ಕಳ, ಹೊನ್ನಾವರ ತಾಲೂಕಾಧ್ಯಕ್ಷ ರಾಜೇಶ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ನಾನಾ ಭಾಗಗಳಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡು ಡಾ. ಎಂ.ಪಿ.ಕರ್ಕಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು,

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button