Focus News
Trending

ಸರ್ಕಾರಿ ಆಸ್ಪತ್ರೆ ಡಾಕ್ಟರ್ ಕಾರಿಗೆ ಕಂಟೇನರ್ ಡಿಕ್ಕಿ. ಕರಿ ದೇವರ ಕೃಪೆಯಿಂದ ಅಪಾಯದಿಂದ ಪಾರಾದ ಜನಾನುರಾಗಿದ್ದ ವೈದ್ಯ !!

ಅಂಕೋಲಾ : ಸರಕಾರಿ ತಾಲೂಕಾಸ್ಪತ್ರೆಯ ಡಾ. ಈಶ್ವರಪ್ಪನವರ ರೆನಾಲ್ಟ ಡಸ್ಟರ್ ಕಾರಿಗೆ ಹಿಂಬದಿಯಿಂದ ಕಂಟೇನರ ಲಾರಿ ಜೋರಾಗಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಬದಿ ಭಾಗ ಬಹುತೇಕ ಜಖಂ ಗೊಂಡಿದ್ದು ಲಕ್ಷಾಂತರ ರೂ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ರಾ.ಹೆ 66 ಹಾರಾವಾಡ ಬಳಿ ನಡೆದ ರಸ್ತೆ ಅಪಘಾತದಲ್ಲಿ ಹತ್ತಿರದಲ್ಲೇ ಇರುವ ಶ್ರೀ ಕರಿದೇವರ ಕೃಪೆಯಿಂದ, ಅದೃಷ್ಟವಶಾತ್ ಡಾ. ಈಶ್ವರಪ್ಪನವರಿಗೆ ಯಾವುದೇ ಅಪಾಯವಾಗಿಲ್ಲ ಎನ್ನುವುದು ಸ್ಥಳೀಯ ಕೆಲವರ ನಂಬಿಕೆಯಾಗಿದೆ.

ಅಂಕೋಲಾ ತಾಲೂಕಾಸ್ಪತ್ರೆಯ ಜನಾನುರಾಗಿ ವೈದ್ಯರೆಂದೇ ಹೆಸರು ವಾಸಿಯಾಗಿರುವ ಡಾ.ಈಶ್ವರಪ್ಪ ಕರ್ತವ್ಯ ಮುಗಿಸಿ ಕಾರವಾರದಲ್ಲಿರುವ ತನ್ನ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ, ಅಂಕೋಲಾ ಕಡೆಯಿಂದ ಕಾರವಾರ ಮಾರ್ಗವಾಗಿ ಸಂಚರಿಸುತ್ತಿದ್ದ ಕಂಟೆನರ ವಾಹನ (MH 14/ H V 9329) ಚಾಲಕ ಉತ್ತರ ಪ್ರದೇಶದ ಅಖಿಲ್ ಅತಿಮೊಹಮದ್ ಗೊರಕಪುರ ತನ್ನ ಕಂಟೇನರ್ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷದಿಂದ ಚಾಲನೆ ಮಾಡಿ ಈಶ್ವರಪ್ಪನವರ ಕಾರಿನ (KA 30 / M 6505 ) ಹಿಂಬದಿಗೆ ಜೋರಾಗಿ ಡಿಕ್ಕಿ ಹೊಡೆದು ಈ ಅಪಘಾತ ಪಡಿಸಿದ ಬಗ್ಗೆ ಅಂಕೋಲಾ ಪೋಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button