Focus News
Trending

ಉತ್ತರಕನ್ನಡ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿಗೆ ಎಮ್.ಎಸ್ ಹೆಗಡೆ ಕಣ್ಣೀಮನೆ ನಾಮ ನಿರ್ದೇಶನ

ಹೊನ್ನಾವರ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿಗೆ ಸಾಮಾನ್ಯ ವರ್ಗದಿಂದ ತಾಲೂಕಿನ ಮುಗ್ವಾ ಗ್ರಾಮದ ಎಮ್.ಎಸ್ ಹೆಗಡೆ ಕಣ್ಣೀಮನೆ,ಅಧಿಕಾರೇತರ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ.

ಎಮ್ ಎಸ್ ಹೆಗಡೆ ಕಣ್ಣಿಯವರು ಜನಾನುರಾಗಿಯಾಗಿ ಗುರುತಿಸಿಕೊಂಡು,ಕ್ಷೇತ್ರದ ಶಾಸಕರುಗಳೊಂದಿಗೆ ಉತ್ತಮ ಒಡನಾಟ ಹೊಂದಿ ಹಲವು ಅಭಿವೃದ್ಧಿ ವಿಚಾರಗಳಿಗೆ ಸಕಾಲಕ್ಕೆ ಸಲಹೆ,ಸೂಚನೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಆಯ್ಕೆಯಾಗಿರುವುದಕ್ಕೆ ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ ಸೇರಿದಂತೆ ಒಡನಾಡಿಗಳು,ಹಿತೈಶಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ

Back to top button