Important
Trending

ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹೆಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ : ಬಾರ್ ಮತ್ತು ಹೊಟೇಲ್ ಒಂದರಲ್ಲಿ ಖೆಡ್ಡಾಗೆ ಬಿದ್ದ ಸರ್ವೆ ವಿಭಾಗದ ಅಧಿಕಾರಿ

ಲೋಕಾಯುಕ್ತ ಬಲೆಗೆ ಬಿದ್ದ ಎ. ಡಿ.ಎಲ್. ಆರ್.

ಅಂಕೋಲಾ: ಭೂ ದಾಖಲೆಗಳ ಸಹಾಯಕ ನಿರ್ದೇಶಕ ( ಎ ಡಿಎಲ್ ಆರ್) ಅವರು ಲಂಚ ಪ್ರಕರಣ ಒಂದರಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳೆದ 1 ತಿಂಗಳ ಹಿಂದಷ್ಟೇ ಪಾಂಡವಪುರದಿಂದ ಅಂಕೋಲಾಕ್ಕೆ ಪದೋನ್ನತಿ ಆಗಿ ಬಂದಿದ್ದ ಪುಟ್ಟಸ್ವಾಮಿ ಎನ್ನುವವರು, ವ್ಯಕ್ತಿಯೋರ್ವರ ಜಮೀನು (ವಿಭಾಗ ನಕ್ಷೆ ) ಮಾಡಿಕೊಡಲು ದೊಡ್ಡ ಮೊತ್ತದ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಮಾತುಕತೆ ಕುದುರಿಸಿ ಈಗಾಗಲೇ ಕೆಲ ದಿನಗಳ ಹಿಂದೆ 5000 ರೂ ಪಡೆದಿದ್ದು, ಈ ದಿನ ( ಜನವರಿ 6 ರಂದು ) ರೂ 15,000 ನಗದು ಹಣವನ್ನು ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಬಾಂಬ್ ಬೆದರಿಕೆಯೊಡ್ಡಿ ಭಟ್ಕಳ ಪೊಲೀಸ ಠಾಣೆಗೆ ಹುಸಿ ಪತ್ರ; ಚೆನ್ನೈನಲ್ಲಿ ಆರೋಪಿ ಸೆರೆ

ರಾ.ಹೆ. 66 ರ ಎ.ಪಿ.ಎಮ್. ಸಿ ಮೈದಾನದ ಪಕ್ಕ ಇರುವ ಬಾರ್ ಮತ್ತು ಹೊಟೇಲ್ ಒಂದರಲ್ಲಿ ರೆಡ್ ಹೆಂಡ್ ಆಗಿ ಖೆಡ್ಡಾಗೆ ಬಿದ್ದಿದ್ದು , ಅಲ್ಲಿಂದ ಅವರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು, ತಹಶೀಲ್ದಾರ ಕಾರ್ಯಾಲಯದ ಮೇಲ್ಮಹಡಿಯಲ್ಲಿರುವ ಭೂದಾಖಲೆಗಳ ಕಛೇರಿಗೆ ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ .

ಈ ಕುರಿತು ಅಧಿಕೃತ ( ಹೆಚ್ಚಿನ ) ಮಾಹಿತಿ ತಿಳಿದು ಬರಬೇಕಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button