Focus NewsImportant
Trending

ಗಂಡ-ಹೆಂಡತಿಯ ಮಧ್ಯೆ ಸಾಲ ತುಂಬುವ ವಿಷಯಕ್ಕೆ ಜಗಳ: ಸಾವಿಗೆ ಶರಣಾದ ಪತಿ

ಯಲ್ಲಾಪುರ: ಗಂಡ-ಹೆಂಡತಿಯ ಮಧ್ಯೆ ಸಾಲ ತುಂಬುವ ವಿಷಯಕ್ಕೆ ಸಂಬಂಧಪಟ್ಟಂತೆ ಜಗಳ ನಡೆದು, ಗಂಡ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಪಟ್ಟಣದ ನೂತನನಗರ ಜಡ್ಡಿಯಲ್ಲಿ ನಡೆದಿದೆ. ನೂತನನಗರ ಜಡ್ಡಿ ನಿವಾಸಿವಿನಾಯಕ ಅಮಾಸಿ (37) ಎಂಬಾತ ಮೃತ ದುರ್ದೈವಿ. ಈತ ನೂತನನಗರ ಜಡ್ಡಿಯ ಬಾಡಿಗೆಗೆ ಇದ್ದ ಮನೆಯ ಅಡುಗೆ ಕೋಣೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮೃತನ ಪತ್ನಿ ವೈಶಾಲಿ ವಿನಾಯಕ ಅಮಾಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾಳೆ.

ಸ್ಟೇರಿಂಗ್ ಕಟ್: 44 ಪ್ರಯಾಣಿಕರಿದ್ದ ಬಸ್ ಪಲ್ಟಿ

ಮೃತ ವಿನಾಯಕ ಅಮಾಸಿ ಹಿಂದೆ ಹೆಸ್ಕಾಂನಲ್ಲಿ ಹಂಗಾಮಿ ಕೆಲಸಗಾರನಾಗಿದ್ದ. ಹೆಸ್ಕಾಂ ಗ್ರಿಡ್‌ನಲ್ಲಿಯೂ ಕೆಲಸ ಮಾಡಿದ್ದ. ನಂತರ ಸೂಪರ್ ಮಾರ್ಟ್ನಲ್ಲಿ ಇತ್ತೀಚೆಗೆ ಆಟೋ ಮೊಬೈಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಮೃತನಿಗೆ ಒಂದು ಮಗು ಕೂಡಾ ಇದೆ. ಪೊಲೀಸ್ ನಿರೀಕ್ಷಕ ರಂಗನಾಥ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ರವಿ ಗುಡ್ಡಿ ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button