ಮಾಹಿತಿ
Trending

ಅಂಕೋಲಾದಲ್ಲಿ ವಿವಿಧ ಸಂಘಟನೆಗಳಿಂದ ತಹಶೀಲ್ದಾರರಿಗೆ ಮನವಿ

‘ಭಾರತ ರಕ್ಷಿಸಿ ಆಂದೋಲನ’
ಅಗಸ್ಟ್ 10ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ

[sliders_pack id=”1487″]

ಅಂಕೋಲಾ : ಅಂದು ಕ್ವಿಟ್ ಇಂಡಿಯಾ ಇಂದು ಸೇವ್ ಇಂಡಿಯಾ ಎನ್ನುವ ಪರಿಭಾಷೆಯಲ್ಲಿ ವಿವಿಧ ಸಂಘಟನೆಗಳು ಅಗಸ್ಟ 10ರಂದು ರಾಷ್ಟ್ರವ್ಯಾಪಿ ಪ್ರತಿರೋಧ ಪ್ರತಿಭಟನೆ ನಡೆಸುತ್ತಿದ್ದು, ತಾಲೂಕಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತ್ರತ್ವದಲ್ಲಿ ಹಲವಾರು ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸಿ,ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ತಹಶೀಲ್ದಾರ ಅವರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಭಾರತ ರಕ್ಷಿಸಿ’ ಆಂದೋಲನ ಮನವಿಯಲ್ಲಿ ತಿಳಿಸಿದಂತೆ ರೈತ ವಿರೋಧಿ ಸುಗ್ರಿವಾಜ್ಞೆಗಳನ್ನು ರದ್ದುಪಡಿಸುವುದು, ಸಂಪೂರ್ಣ ಲಾಭದಾಯಕ ಬೆಲೆ ರೈತನ ಕಾನೂನು ಬದ್ಧ ಹಕ್ಕು ಎಂಬುವುದನ್ನು ಖಾತರಿಪಡಿಸುವುದು, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು, ಡಿಸೇಲ್ ದರ ಇಳಿಕೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ನಿಲ್ಲಿಸುವುದು, ಕೋವಿಡ್ ಸಂಕಷ್ಟಕ್ಕೊಳಗಾದ ರೈತರು, ಕೂಲಿ ಕಾರ್ಮಿಕರು, ಆಶಾ-ಅಂಗನವಾಡಿ-ಬಿಸಿಯೂಟ ನೌಕರರು ಸೇರಿದಂತೆ ಎಲ್ಲಾ ವರ್ಗದ ಜನತೆಗೆ ಪೂರ್ಣ ಪ್ರಮಾಣದ ಪರಿಹಾರ ದೊರಕುವಂತೆ ಕೂಡಲೇ ಕ್ರಮ ಕೈಗೊಳ್ಳುವುದು ಮತ್ತಿತರ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮನವಿ ಓದಿದರು. ವಿವಿಧ ಸಂಘಟನೆಗಳ ಪ್ರಮುಖರಾದ ಜಾಜು ಗೌಡ, ರಾಜಗೋಪಾಲ ಶೆಟ್, ಮೀನಾಕ್ಷಿ ನಾಯಕ, ಗೀತಾ ಗೌಡ, ಸೀತಾ ಗೌಡ, ಚಂದ್ರಕಾಂತ ಗೌಡ, ಗಣೇಶ ಗೌಡ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ತಹಶೀಲ್ದಾರ ಉದಯ ಕುಂಬಾರ ಮನವಿ ಸ್ವೀಕರಿಸದರು. ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿದ್ದ ಕುಮಟಾ ಉಪವಿಭಾಗಾಧಿಕಾರಿ ಅಜೀತ್ ಎಮ್ ಅವರ ಬಳಿಯೂ ಸಂಘಟನೆಯ ಮುಖ್ಯಸ್ಥರು, ಕೋವಿಡ್ ಸಂಕಷ್ಟ ಕಾಲದಲ್ಲಿ ಸರ್ಕಾರ ಬಡವರ ನೆರವಿಗೆ ಬರುವಂತೆ ವಿನಂತಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button