![](http://i0.wp.com/vismaya24x7.com/wp-content/uploads/2020/07/2-3.jpg?fit=620%2C349&ssl=1)
ಜಿಲ್ಲೆಯಲ್ಲಿoದು 99 ಕರೊನಾ ಪ್ರಕರಣ
74 ಮಂದಿ ಗುಣಮುಖರಾಗಿ ಬಿಡುಗಡೆ
ಕುಮಟಾದಲ್ಲಿ ಇಂದು ನಾಲ್ಕು ಕೇಸ್
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ ಗಗನಮುಖಿಯಾಗಿದೆ. ಜಿಲ್ಲೆಯಲ್ಲಿ ಬುಧವಾರ 99 ಕರೊನಾ ಕೇಸ್ ಪತ್ತೆಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 3 ಸಾವಿರದ ಗಡಿದಾಟಿದೆ. ಹೊನ್ನಾವರದಲ್ಲಿ 20, ಕಾರವಾರದಲ್ಲಿ 14, ಹಳಿಯಾಳದಲ್ಲಿ 27, ಕುಮಟಾ 4, ಭಟ್ಕಳದಲ್ಲಿ 15, ಶಿರಸಿಯಲ್ಲಿ 5, ಸಿದ್ದಾಪುರ 1, ಮುಂಡಗೋಡದಲ್ಲಿ 6, ಜೊಯಿಡಾದಲ್ಲಿ 7 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇದೇ ವೇಳೆ, 74 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 20, ಮುಂಡಗೋಡದಲ್ಲಿ 23, ಯಲ್ಲಾಪುರದಲ್ಲಿ 5, ಹಳಿಯಾಳದಲ್ಲಿ 26 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದು 99 ಕೇಸ್ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,009ಕ್ಕೆ ಏರಿಕೆಯಾಗಿದೆ. 913 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
ಕುಮಟಾದಲ್ಲಿ ಇಂದು ನಾಲ್ಕು ಕೇಸ್;
ಕುಮಟಾದಲ್ಲಿ ಇಂದು ನಾಲ್ಕು ಕೇಸ್
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ದಿನ ನಿತ್ಯವೂ ಕೂಡ ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗುತ್ತಲೆ ಇದ್ದು, ಇಂದು ಕೂಡ ಒಟ್ಟು ನಾಲ್ವರಿಗೆ ಸೋಂಕು ತಗುಲಿದೆ. ಕುಮಟಾ ತಾಲೂಕಿನ ವಿವೇಕನಗರದ 86 ವರ್ಷದ ವೃದ್ಧೆ, ಹೆರವಟ್ಟಾದ 40 ವರ್ಷದ ಪುರುಷ, ದಿವಗಿಯ 39 ವರ್ಷದ ಪುರುಷ, ಬಾಡದ 27 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಈ ನಾಲ್ವರು ಕೂಡ ಈ ಹಿಂದೆ ಸೋಂಕು ಕಾಣಿಸಿಕೊಂಡವರ ಪ್ರಾಥಮಿಕ ಸಂಪರ್ಕಕ್ಕೆ ಬಂದು ಕ್ವಾರಂಟೈನ್ನಲ್ಲಿ ಇದ್ದವರು ಎನ್ನಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.