ಗಂಗಾವಳಿ ನದಿಯಲ್ಲಿ ವಾಹನ ಪತ್ತೆ?  ಶೋಧ ಕಾರ್ಯಾಚರಣೆಗೆ ಮಹತ್ವಪೂರ್ಣ ತಿರುವು: ಲಾರಿಯಲ್ಲೇ ಇದ್ಯಾ ಅರ್ಜುನ್ ದೇಹ?

ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿ ಆರಂಭದಿಂದಲೂ  ಹಲವರಲ್ಲಿ ಕುತೂಹಲ ಮೂಡಿಸಿ, ಎಲ್ಲಡೆ ವೈರಲ್ ಆಗುತ್ತಿದ್ದ ಕೇರಳ ಮೂಲದ ಅರ್ಜುನ್ ಈತನ ಬೆಂಜ್ ಲಾರಿ ಕುರುಹು ಕೊನೆಗೂ ಪತ್ತೆಯಾಗಿದೆ ಎನ್ನಲಾಗಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ಪ್ರಕಾರ, ಶೋಧ ಕಾರ್ಯಾಚರಣೆ ವೇಳೆ, ನದಿಯಲ್ಲಿ ಪಲ್ಟಿಯಾದ ರೀತಿಯಲ್ಲಿ ವಾಹನವೊಂದರ ಚಕ್ರಗಳು ಕಂಡು ಬಂದಿದ್ದು, ಅದಕ್ಕೆ ಹಗ್ಗ ಕಟ್ಟಿ ಬಂದಿದ್ದಾರೆ.

ನದಿಯಾಳದಿಂದ ಹೊರತೆಗೆದ ಕಟ್ಟಿಗೆ ತುಂಡು : ಅರ್ಜುನ್ ಬೆಂಜ್ ಲಾರಿಯಲ್ಲಿತ್ತಂತೆ? ನಾಪತ್ತೆಯಾದ ಮೂವರ ಅಸ್ಥಿ ಸಿಕ್ಕರೂ ನೆಮ್ಮದಿ ಎನ್ನುತ್ತಿರುವ ಕುಟುಂಬಸ್ಥರು

ಅದು ಅರ್ಜುನ್ ಇದ್ದ ಲಾರಿಯೇ  ಅಥವಾ ಗ್ಯಾಸ್ ಟ್ಟಾಂಕರ್  ಕ್ಯಾಬಿನ್ ಅಥವಾ ಇತರೆ ವಾಹನದ್ದೇ ಎಂದು,ಅದನ್ನು ಮೇಲೆತ್ತಿದ ಬಳಿಕವಷ್ಟೇ ಸ್ಪಷ್ಟವಾಗಿ ತಿಳಿದು ಬರಬೇಕಿದೆ. ಒಂದೊಮ್ಮೆ ಅದು ಅರ್ಜುನ್ ಇದ್ದ ಲಾರಿಯೇ ಆಗಿದ್ದಲ್ಲಿ ಅರ್ಜುನ್ ದೇಹ ಆ ಲಾರಿಯಲ್ಲಿ ಇರಬಹುದೇ ಎಂಬ ಪ್ರಶ್ನೆ ಹಾಗೂ ಕುತೂಹಲ  ಮೂಡುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version