ಶಿರೂರು ಗುಡ್ಡ ಕುಸಿತ ದುರಂತ: ಡ್ರೈವರ್ ಕ್ಯಾಬಿನ್ ನಲ್ಲಿ ಇದೆ ಅರ್ಜುನ್ ಮೃತದೇಹ ಅವಶೇಷ

ಅಂಕೋಲಾ: ಶಿರೂರು ಗುಡ್ಡ ಕುಸಿತದ ದುರಂತದ ಮೂರನೇ ಹಂತದ ಕಾರ್ಯಾಚರಣೆ ಫಲ ನೀಡಿದೆ. ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಕೇರಳದ ಭಾರತ್ ಬೆಂಜ್ ಲಾರಿ ಪತ್ತೆಯಾಗಿದ್ದು, ಲಾರಿಯ ಕ್ಯಾಬಿನ್ ನಲ್ಲೇ ಅರ್ಜುನ್ ಮೃತ ದೇಹ ಸಹ ಇರುವುದಾಗಿ ಮಾಹಿತಿ ಸಿಕ್ಕಿದೆ. ಅಂಕೋಲಾದ ಗಂಗಾವಳಿ ನದಿಯಲ್ಲಿ ಪತ್ತೆಯಾದ ಭಾರತ್ ಬೆಂಜ್ ಲಾರಿಯನ್ನು ಡ್ರೆಜ್ಜರ್ ಯಂತ್ರದ ಮೂಲಕ ಮೇಲೆತ್ತಲಾಗಿದೆ. ಕೇರಳದ ಬೆಂಜ್ ಲಾರಿಯ ಮಾಲೀಕ ಮನಾಫ್ ಅವರು ಇದು ತಮ್ಮದೆ ಲಾರಿಯೆಂದು ಗುರುತಿಸಿದ್ದಾರೆ. ಲಾರಿಯೊಳಗೆ ಮೃತದೇಹ ಇದ್ದು, ಇದು ಅರ್ಜುನ್ ಅವರ ಮೃತದೇಹವೆಂದು ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

ಶಿರೂರು ಗುಡ್ಡ ಕುಸಿತ ದುರಂತ: ಪತ್ತೆಯಾದ ಅರ್ಜುನ್ ಲಾರಿ ಮತ್ತು ಮೃತದೇಹ

ಕೇರಳದ ಅರ್ಜುನ್ ಜೊತೆ ಸ್ಥಳೀಯ ಜಗನ್ನಾಥ ಮತ್ತು ಲೋಕೇಶ್ ಕಣ್ಮರೆಯಾಗಿದ್ದಾರೆ. ಅವರ ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿಯಾಗಿದೆ. ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್ ಅವರು ನೀಡಿದ್ದ ನಿರ್ದೇಶನದಂತೆ ಶಿರೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಲಕ್ಷ್ಮಣ ನಾಯ್ಕ ಅವರ ಅಂಗಡಿ ಇದ್ದ ಸ್ಥಳದಲ್ಲಿ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದು, ಈ ತಂತ್ರ ಫಲಕೊಟ್ಟಿದೆ.

ಶಿರೂರು ಗುಡ್ಡ ಕುಸಿತ ಸಂಭವಿಸಿ ಬರೊಬ್ಬರಿ ಎರಡು ತಿಂಗಳು ಕಳೆದಿತ್ತು. ಕೇರಳದ ಲಾರಿ ಹುಡುಕಾಟ ಮತ್ತು ನಾಪತ್ತೆಯಾದವರ ಅವಶೇಷಗಳು ರಕ್ಷಣಾ ತಂಡಕ್ಕೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಇದೀಗ ಅರ್ಜುನನ ಲಾರಿ ಸಿಕ್ಕಿರುವುದು ತಂಡಕ್ಕೆ ಮತ್ತು ನಾಪತ್ತೆಯಾದವರ ಕುಟುಂಬಸ್ಥರಿಗೆ ಹೊಸ ಭರವಸೆ ಸಿಕ್ಕಂತಾಗಿದೆ.

ಮೊದಲ ಹಂತದ ಕಾರ್ಯಾಚರಣೆ ಸಂದರ್ಭದಲ್ಲಿ ರಾಡಾರ್ ತಂತ್ರಜ್ಞಾನದ ಮೂಲಕ ನಾಲ್ಕು ಪಾಯಿಂಟ್ ಗಳನ್ನು ಗುರುತಿಸಿ ನಾಲ್ಕನೇ ಪಾಯಿಂಟ್ ಗುರುತಿಸಿರುವ ಸ್ಥಳದಲ್ಲಿ ಕೇರಳದ ಲಾರಿ ಇರುವ ಸಾಧ್ಯತೆ ಕುರಿತು ಅಂದಾಜಿಸಲಾಗಿತ್ತು . ಜೊತೆಗೆ ಅದೇ ಸ್ಥಳದಲ್ಲಿ ಲಾರಿಯ ಬಿಡಿಭಾಗ ಪತ್ತೆಯಾಗಿತ್ತು.

ವಿಶ್ರಾಂತ ಸೇನಾಧಿಕಾರಿ ಮೇಜರ್ ಜನರಲ್ ಇಂದ್ರಬಾಲನ್ ಅವರ ಸೇವೆಯನ್ನು ಮತ್ತೆ ಪಡೆಯಲಾಗಿದ್ದು, ಶಾಸಕ ಸತೀಶ ಸೈಲ್ ಮತ್ತು ಆಡಳಿತ ವ್ಯವಸ್ಥೆಯ ವಿಶೇಷ ಪ್ರಯತ್ನ ಹಾಗೂ ವಿನಂತಿ ಮೇರೆಗೆ,ಅವರು ದೆಹಲಿಯಿಂದ ಅಂಕೋಲಾದ ಶಿರೂರು ಘಟನಾ ಸ್ಥಳಕ್ಕೆ ಮತ್ತೆ ಬಂದು ಹೋಗಿದ್ದರು, ಕಾರ್ಯಾಚರಣೆ ಸಂದರ್ಭದಲ್ಲಿ ಹಾಜರಿದ್ದು ಗುರುತಿಸಿರುವ ನಾಲ್ಕನೇ ಪಾಯಿಂಟ್ ನಲ್ಲಿ ನೀರಿನ ಆಳದಲ್ಲಿ ಲಾರಿ ಇದ್ದು ಅದರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಬಿದ್ದಿರುವ ಸಾಧ್ಯತೆ ಹಿನ್ನಲೆಯಲ್ಲಿ, ಮಣ್ಣು ತೆರುವು ಮಾಡಿ ಲಾರಿ ಮೇಲೆಕ್ಕೆ ಎತ್ತುವುದುಕ್ಕೆ ಯೋಜನೆ ರೂಪಿಸಲಾಗಿತ್ತು.

ಸ್ಥಳೀಯ ಶಾಸಕ ಸತೀಶ ಸೈಲ್, ಎಸ್ಪಿ ನಾರಾಯಣ ಎಂ, ಬಂದರು ಇಲಾಖೆ ಅಧಿಕಾರಿ ಮಹೇಂದ್ರ, ಕಾರ್ಯಾಚರಣೆಯ ವೇಳೆ ಉಪಸ್ಥಿತರಿದ್ದು ಮಾರ್ಗದರ್ಶನ ನೀಡುತ್ತಿದ್ದರು. ಅರ್ಜುನನ್ನು ಹುಡುಕಿಕೊಂಡು ಆತನ ಸಹೋದರಿ ಅಂಜು ಮತ್ತು ಆಕೆಯ ಪತಿ, ಸ್ಥಳೀಯರಾದ ಜಗನ್ನಾಥ ನಾಯ್ಕ ಅಸ್ಥಿ ಆದರೂ ದೊರೆತಿತೇ ಎಂದು ಆತನ ಮಕ್ಕಳು ಮತ್ತು ಕುಟುಂಬಸ್ಥರು, ಅಂತೆಯೇ ಗಂಗೆಕೊಳ್ಳದ ಲೊಕೇಶ ನಾಯ್ಕ ಮೃತ ದೇಹ ಆದರೂ ಸಿಗಲಿ ಎಂದು ಆತನ ಸಹೋದರ ವಿನೋದ್,ಕಾರ್ಯಚರಣೆ ನಡೆಯುವ ಸ್ಥಳದಲ್ಲಿ ಇದ್ದು ಪ್ರಾರ್ಥಿಸುತ್ತಿಸುತ್ತಿದ್ದರು.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ, ಅಂಕೋಲಾ

Exit mobile version