ಅಮಲಿನಲ್ಲಿದ್ದವನಿಗೆ ನಶೆ ಇಳಿಸಿದ ಪೊಲೀಸರು

ಶಿರಸಿ: ಅಕ್ರಮವಾಗಿ ಗಾಂಜಾ ಸೇವನೆ ಮಾಡುವವರ ಮೇಲೆ ಶಿರಸಿ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಗಾಂಜಾ ಸೇವನೆ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ ಘಟನೆ ನಡೆದಿದೆ. ನಗರದ ಕಸ್ತೂರಬಾ ನಗರದ ಸರ್ಫರಾಜ್ ಶಾರುಖ್ ಸಮೀರ್ ಖಾನ್ ಬಂಧಿತ ಆರೋಪಿ.

ಶಿರೂರು ದುರಂತ: ಮುಂದುವರಿದ ಶೋಧಕಾರ್ಯ: ಒಂದೊಂದೇ ಅವಶೇಷಗಳು ಹೊರಕ್ಕೆ

ಈತನು ನಗರದ ಶಂಕರಹೊoಡದ ಹತ್ತಿರ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ. ಈತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು, ನಿಷೇಧಿತ ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದ್ದು ಇತನ ವಿರುದ್ದ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version