ಅಂಕೋಲಾ : ತಾಲೂಕಿನ ಬಾಸಗೋಡ ಗ್ರಾಮದ ನಿವೃತ್ತ ಶಿಕ್ಷಕ ರಾಮಚಂದ್ರ ಮೋನಪ್ಪ ನಾಯಕ(83) ಶನಿವಾರ ಬೆಳಿಗ್ಗೆ ದೈವಾಧೀನರಾದರು. ಜಿಲ್ಲೆಯ ವಿವಿಧೆಡೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿ, ನಂತರ ಬೆಳಂಬಾರ-ಮೂಡ್ರಾಣಿ ಶಾಲೆಯಲ್ಲಿ ನಿವೃತ್ತರಾಗಿದ್ದರು.
ತಮ್ಮ ಶಿಸ್ತುಬದ್ಧ ಜೀವನ, ನೇರ ನಡೆನುಡಿಗಳಿಂದ ಗುರುತಿಸಿ ಕೊಂಡಿದ್ದ ಇವರು ತಮ್ಮ ಆಪ್ತ ವಲಯದಲ್ಲಿ ಹಾಸ್ಯ ಪ್ರವೃತ್ತಿಯ ಮೂಲಕವೂ ಗಮನ ಸೆಳೆಯುತ್ತಿದ್ದರು. ಸುತ್ತಮುತ್ತಲ ಹಳ್ಳಿಗರ ಪ್ರೀತಿ-ವಿಶ್ವಾಸಗಳಿಸಿದಲ್ಲದೇ ರಾಮಚಂದ್ರ ಮಾಸ್ತರ ಎಂದೇ ಪರಿಚಿತರಾಗಿದ್ದರು.
ಮೃತರು, ಪತ್ನಿ ದೇವಮ್ಮಾ ಆರ್.ನಾಯಕ, ಮಕ್ಕಳಾದ ಶ್ರೀ ಲತಾ ಅರಮನೆ, ರಾಜಶ್ರೀ ಜಯರಾಮ ನಾಯಕ, ಹರೀಶ ಆರ್.ನಾಯಕ, ರಾಜೇಶ ಆರ್.ನಾಯಕ, ಮೊಮ್ಮಕ್ಕಳು, ಕುಟುಂಬ ವರ್ಗ ಮತ್ತು ಅಪಾರ ಬಂಧುಬಳಗ ತೊರೆದಿದ್ದಾರೆ. ಹಿರಿಯ ಚೇತನದ ಅಗಲುವಿಕೆಗೆ ವಿವಿಧ ಗಣ್ಯರು ಸಂತಾಪ ಸೂಚಿ ಸಿದ್ದು, ಮೃತರ ಅಂತ್ಯ ಕ್ರಿಯೆಯಲ್ಲಿ ಊರ ನಾಗರಿಕರು, ತಾಲೂಕಿನ ಹಲವು ಪ್ರಮುಖರು, ಬಂಧು ಬಳಗ ದವರು ಮತ್ತು ಕುಟುಂಬದ ಹಿತೈಷಿಗಳು ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು
- ಅಂಕೋಲಾ ದುರಂತ: ಸ್ಥಳೀಯ ಮೀನುಗಾರರ ಸಹಕಾರದಲ್ಲಿ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡದ ಕಾರ್ಯಾಚರಣೆ
- ಮುನ್ನೆಚ್ಚರಿಕಾ ಕ್ರಮ: ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ
- ಶಿರೂರು ಗುಡ್ದಕುಸಿತ ದುರಂತ : ಸ್ಮಶಾನದಲ್ಲಿ ಹೂತಿದ್ದ ಶವ ಹೊರತೆಗೆಸಿದ್ದೇಕೆ ?
- ಕಾರಿನ ಮೇಲೆ ಮರಬಿದ್ದು ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
- ಹಳದೀಪುರ,ಮುರ್ಡೇಶ್ವರ ದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರಉಚಿತ ಶಸ್ತ್ರಚಿಕಿತ್ಸೆ ಗೆ ಅರ್ಹ 15 ಜನರ ಆಯ್ಕೆ