ಸಾಗರ ಕವಚ ಕಾರ್ಯಾಚರಣೆ: ಮೀನುಗಾರರಿಗೆ ಮಹತ್ವದ ಸೂಚನೆ

ಕಾರವಾರ: ಕರಾವಳಿ ಕಾವಲು ಪಡೆಯಿಂದ ಸಾಗರ ಕವಚ ಕಾರ್ಯಾಚರಣೆ ಅಕ್ಟೋಬರ್ 7, 8 ಬುಧವಾರ, ಗುರುವಾರ ಎರಡು ದಿನಗಳ ಕಾಲ ನಡೆಯಲಿದೆ. ಈ ಸಂಬAಧ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದ ಮೀನುಗಾರರಿಗೆ ಮಹತ್ವದ ಸೂಚನೆ ನೀಡಲಾಗಿದೆ.


ಬುಧವಾರ ಬೆಳಗ್ಗೆ 5 ಗಂಟೆಯಿoದ ಮುಂದಿನ 36 ತಾಸುಗಳ ಕಾಲ ಈ ಕಾರ್ಯಾಚರಣೆ ಜಾರಿಯಲ್ಲಿರಲಿದೆ. ಈ ವೇಳೆಯಲ್ಲಿ ಕಾವಲು ಪಡೆಯ ಸಿಬ್ಬಂದಿ ಮೀನುಗಾರಿಕೆಗೆ ತೆರಳುವ ಮತ್ತು ಮರಳುವ ಎಲ್ಲ ಬೋಟ್, ದೋಣಿಗಳನ್ನು ತಪಾಸಣೆ ಮಾಡಲಿದ್ದಾರೆ.


ಮೀನುಗಾರಿಕೆ ತೆರಳುವ ಬೋಟ್, ದೋಣಿಯ ಪ್ರತಿಯೊಬ್ಬ ಮೀನುಗಾರರು ಗುರುತಿನ ಕಾರ್ಡುಗಳನ್ನು ಹೊಂದಿರಬೇಕು. ಮೀನುಗಾರರ ಐಡಿ ಕಾರ್ಡ್, ಆಧಾರ ಕಾರ್ಡ್ ಯಾವುದಾದರು ಗುರುತಿನ ಕಾರ್ಡ್ ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಬೋಟ್, ದೋಣಿ ಮಾಲೀಕರು ಸಂಬoಧಪಟ್ಟ ದಾಖಲೆಗಳನ್ನು ಇಟ್ಟುಕೊಂಡಿರಬೇಕು.


ಸಮುದ್ರದಲ್ಲಿ ಯಾರಾದರು ಬೋಟ್, ದೋಣಿ ಹತ್ತಿ ದಡಕ್ಕೆ ಸೇರಿಸಲು ಹೇಳಿದರೆ ಯಾರನ್ನೂ ಹತ್ತಿಸಿಕೊಳ್ಳಬಾರದು. ಮೀನುಗಾರಿಕೆ ಇಲಾಖೆ, ಜಟ್ಟಿ, ಬಂದರು, ಲ್ಯಾಂಡಿಂಗ್ ಪಾಯಿಂಟ್ ಗಳಲ್ಲಿ ಮೀನುಗಾರಿಕೆ ತೆರಳುವ, ಮರಳುವ ಬೋಟ್, ದೋಣಿ ಮಾಹಿತಿಯನ್ನು ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.


ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್,

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version