ಅನಾಹುತ ತಪ್ಪಿಸಿದ ಪೊಲೀಸರು
ದರೋಡೆಗಾಗಿ ರಸ್ತೆಯಲ್ಲಿ ಹೊಂಚು ಹಾಕಿದ್ದ ದುಷ್ಕರ್ಮಿಗಳು
ಗೋಕರ್ಣ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೋಗುವ ವಾಹನಗಳನ್ನು ತಡೆದು ದರೋಡೆ ಮಾಡಲು ಸಂಚು ರೂಪಿಸಿದ್ದ ಐವರು ಆರೋಪಿಗಳಲ್ಲಿ ಮೂವರನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಮತ್ತಿಬ್ಬರು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳಿಂದ 4.12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಟ್ಕುಳಿ ಬಳಿ ಲಾರಿಗಳನ್ನು ಅಡ್ಡಗಟ್ಟಲು ಯೋಜನೆ ರೂಪಿಸಿದ್ದರು. ಕಾರಿನಲ್ಲಿ ಬಂದಿದ್ದ ಅವರು, ಮಾರಕಾಸ್ತ್ರ, ಖಾರದ ಪುಡಿ ಮುಂತಾದ ವಸ್ತುಗಳನ್ನು ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲೇ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.
ಆರೋಪಿಗಳು ರಾಜ್ಯದ ಹಲವೆಡೆ ಹೆದ್ದಾರಿಯಲ್ಲಿ ದರೋಡೆ, ಮನೆಗಳಲ್ಲಿ ಕಳವು, ವಾಹನ ಕಳವು, ಸುಲಿಗೆ, ಡಕಾಯತಿ ಮುಂತಾದ್ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸರ್ಕಾರಿ ಶಾಲಾ ಮುಖ್ಯಾಧ್ಯಾಪಕ ಅಕಾಲಿಕ ವಿಧಿವಶ. ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಹಾರಿಹೋದ ಪ್ರಾಣಪಕ್ಷಿ
- ರಾಸಾಯನಿಕ ಸೋರಿಕೆ: 18 ಕಾರ್ಮಿಕರು ಅಸ್ವಸ್ಥ
- ಲೋಕಮಾತಾ ಅಹಿಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಮಾನೋತ್ಸವ
- ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ನೇಣಿಗ ಶರಣು?ಗಂಡ ಬಂದು ನೋಡುವಷ್ಟರಲ್ಲಿ ಹಾರಿ ಹೋಗಿತ್ತು ಪ್ರಾಣ ಪಕ್ಷಿ,
- ಹಿರಿಯ ನಾಗರಿಕ ಗೋವಿಂದ್ರಾಯ ಕಾಮತ ವಿಧಿವಶ : ಯಕ್ಷಗಾನ ಕಲಾವಿದ, ಪಾಕ ಪ್ರವೀಣ , ಗಾಂಧೀ ಟೋಪಿಧಾರಿ ಇನ್ನಿಲ್ಲ
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,