ಭಟ್ಕಳದಲ್ಲಿ ಇಬ್ಬರಿಗೆ ವಿಷಪೂರಿತ ಹಾವು ಕಡಿತ
ಹಾವು ಕಡಿದ ಬಾಲಕ-ಬಾಲಕಿಯ ರಕ್ಷಣೆ
ಭಟ್ಕಳ: ತಾಲೂಕಿನಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ವಿಷಪೂರಿತ ಹಾವು ಕಚ್ಚಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳನ್ನು ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ, ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಮಾರುಕೇರಿಯ ಭರತ್ ಎಸ್ ನಾಯ್ಕ ಎಂಬಾತನಿಗೆ ಮನೆಯಲ್ಲಿ ಹಾವು ಕಚ್ಚಿತ್ತು. ಮನೆಯವರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈತನಿಗೆ ಮನೆಯೊಳಗಿಟ್ಟಿದ್ದ ತಿಂಡಿಡಬ್ಬ ತೆಗೆಯುವಾಗ ನಾಗರಹಾವು ಕಚ್ಚಿತ್ತು.
ಇನ್ನೊಂದು ಪ್ರಕರಣದಲ್ಲಿ ತಾಲೂಕಿನ ವೆಂಟಕಾಪುರ ಗ್ರಾಮದ ಶ್ರೇಯಾ ಎನ್ನುವ ನಾಲ್ಕು ವರ್ಷದ ಯುವತಿಯ ಕೈಗೆ ಹಾವು ಕಚ್ಚಿತ್ತು. ಕೂಡಲೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಮನೆಯವರು ಸೇರಿದ್ದಾರೆ. ಈ ವೇಳೆ ಜೀವಂತ ಹಾವನ್ನೂ ಹಿಡಿದು ಆಸ್ಪತ್ರೆಗೆ ಕರೆತಂದಿದ್ದರು. ಇದರಿಂದ ವೈದ್ಯರಿಗೆ ಚಿಕಿತ್ಸೆ ಸುಲಭವಾಗಿದೆ. ಈಕೆಯನ್ನೂ ಕೂಡಾ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ವಿಸ್ಮಯ ನ್ಯೂಸ್, ಭಟ್ಕಳ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಆಕಸ್ಮಿಕ ಬೆಂಕಿ: ಒಂದುವರೆ ಎಕರೆಯಷ್ಟು ಅಡಕೆ ತೋಟ ನಾಶ
- Revenue Department Recruitment: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ: 21 ರಿಂದ 42 ಸಾವಿರ ವೇತನ: ಪಿಯುಸಿ ಆದವರು ಅರ್ಜಿ ಸಲ್ಲಿಸಿ
- ಶಿರಸಿಯಲ್ಲಿ ಆರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ
- ಪಕ್ಷದಲ್ಲಿ ಇರಲು ಇಷ್ಟವಿಲ್ಲವಾದರೆ ರಾಜೀನಾಮೆ ನೀಡಿ: ಶಾಸಕ ಶಿವರಾಮ ಹೆಬ್ಬಾರ್ ಗೆ ಸುನೀಲ್ ಕುಮಾರ ತಿರುಗೇಟು