Trending
ಗೆಳೆಯರ ಜೊತೆ ಪ್ರವಾಸಕ್ಕೆ ಬಂದವ ಹೆಣವಾಗಿ ಮರಳಿದ

ಕುಮಟಾ: ಸಮುದ್ರದಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ವ್ಯಕ್ತಿಯೋರ್ವ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಗೋಕರ್ಣದ ಕುಡ್ಲೆ ಕಡಲ ತೀರದಲ್ಲಿ ನಡೆದಿದೆ. ಕೇರಳ ಮೂಲದ ವಿಶ್ವನಾಥ (30) ಮೃತ ವ್ಯಕ್ತಿ. ಈತ ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಗೆಳೆಯರ ಜೊತೆ ಸಮುದ್ರಲ್ಲಿ ಈಜಲು ತೆರಳಿದ್ದ. ಸಮುದ್ರದ ಈಜುತ್ತಿರುವಾಗ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಗೋಕರ್ಣ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶವವನ್ನು ಸಾಗಿಸಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಗೋಕರ್ಣ
[sliders_pack id=”1487″]ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ತುಮಕೂರು ಹೆದ್ದಾರಿಯಲ್ಲಿ ಭೀಕರ ದುರಂತ: ಕಾರಿನಲ್ಲೇಭಾರೀ ಸ್ಫೋಟದೊಂದಿಗೆ ಯುವಕ ಸಾವು; ಯುವತಿ ಪಾರು : ಅಂಕೋಲಾ ಮೂಲದ ಯುವಕ ಯುವತಿಯರೇ ?
- ಚೆಕ್ ಸ್ವೀಕರಿಸುವ ವೇಳೆ ಕಾಡಿದ ಪುತ್ರನ ನೆನಪು : ಭಾವುಕವಾಗಿ ಕಣ್ಣೀರಾದ ತಾಯಿ
- ಕಪ್ಪುಬಣ್ಣಕ್ಕೆ ತಿರುಗಿದ ನೀರು: ಮನೆತುಂಬಾ ಪೆಟ್ರೋಲ್, ಡಿಸೇಲ್ ವಾಸನೆ
- ಜಪಾನ್ ಪ್ರವಾಸ ಮುಗಿಸಿದ ಬಂದ ಸರ್ಕಾರಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ
- ಕರುನಾಡಿನ ಅಡಿಕೆಗೆ ಕಂಟಕ: ಮಲೆನಾಡು-ಕರಾವಳಿ ಬೆಳೆಗಾರರಲ್ಲಿ ತೀವ್ರ ಆತಂಕ!








