ಅಂಕೋಲಾ ಮಾರ್ಕೆಟಿಂಗ್ ಸೊಸೈಟಿಯಿಂದ ಸಚಿವ ಹೆಬ್ಬಾರ್ ಅವರಿಗೆ ಸನ್ಮಾನ

ಅಂಕೋಲಾ : ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವರಾದ ಶಿವರಾಮ ಹೆಬ್ಬಾರವರಿಗೆ ಅಂಕೋಲಾ ಮಾರ್ಕೆಂಟಿಂಗ್ ಸೊಸೈಟಿ ವತಿಯಿಂದ ಶಿರಸಿಯ ಕೆ.ಡಿ.ಸಿ.ಸಿ.ಬ್ಯಾಂಕ್ ಸಭಾಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕೆ.ಡಿ.ಸಿ.ಸಿ.ಬ್ಯಾಂಕ್ ಮತ್ತು ಮಾರ್ಕೆಂಟಿAಗ್ ಸೊಸೈಟಿಯ ನಿರ್ದೇಶಕ ವಿಜಯಕುಮಾರ ಎಸ್. ನಾಯಕ ಅಗ್ರಗೋಣ, ಮಾರ್ಕೆಂಟಿಂಗ್ ಸೊಸೈಟಿಯ ಅಧ್ಯಕ್ಷ ರಾಜೀವ ಜಿ.ನಾಯಕ ಭಾವಿಕೇರಿ, ಮುಖ್ಯ ಕಾರ್ಯ ನಿರ್ವಾಹಕ ದೇವಾನಂದ ಬಿ.ಗಾಂವಕಾರ ಬಾಸಗೋಡ, ನಿರ್ದೇಶಕರಾದ ವಿನೋದ ಬಿ. ನಾಯಕ ಬಾಸಗೋಡ, ಮಂಜೇಶ್ವರ ಎಮ್.ನಾಯಕ ಬೇಲೇಕೇರಿ, ಉದಯ ವಾಮನ ನಾಯಕ ಭಾವಿಕೇರಿ, ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಮೋಹನದಾಸ ಜಗದೀಶ ನಾಯಕ (ಬಾಸಗೋಡ) ಶಿರಸಿ, ಉಪಸ್ಥಿತರಿದ್ದರು.

– ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

[sliders_pack id=”1487″]
Exit mobile version