Follow Us On

Google News
Uttara Kannada
Trending

ವಿವಿಧ ಅಂಗಡಿಗಳಿಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಭೇಟಿ: ಬಾಲ ಕಾಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂದು ಪರಿಶೀಲನೆ

ಕಾರವಾರ: ನಗರದ ಕಡಲತೀರದಲ್ಲಿರುವ ವಿವಿಧ ಫಾಸ್ಟ್ ಫುಡ್ ಸ್ಟಾಲ್, ನಗರದ ವಿವಿಧ ಹೊಟೇಲ್ ಗಳಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದಿಢೀರ್ ಭೇಟಿ ನೀಡಿ, ಬಾಲ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎನ್ನುವ ಸಂಗತಿನ್ನು ಖಚಿತ ಪಡಿಸಿಕೊಂಡರು. ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಕಾರವಾರ ಕಡಲ ತೀರದಲ್ಲಿ ಇರುವ ವಿವಿಧ ಪಾಸ್ಟ್ ಫುಡ್ ಅಂಗಡಿ ಹಾಗೂ ಹೋಟೆಲ್ ಮೇಲೆ ಕಾರ್ಮಿಕ ಇಲಾಖೆಯ ಜಿಲ್ಲಾ ಯೋಜನಾ ನಿರ್ದೇಶಕರು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ಮಕ್ಕಳ ರಕ್ಷಣಾ ಘಟಕ ಕಾರವಾರ ಇವರು ಜಂಟಿಯಾಗಿ ತಪಾಸಣೆ ನಡೆಸಿದರು. ಈ ವೇಳೆ, ಯಾವುದೇ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳದಂತೆ ಸೂಚನೆ ನೀಡಲಾಗಿದ್ದು, ಜನಜಾಗೃತಿಗಾಗಿ ಬಿತ್ತಿಪತ್ರಗಳನ್ನು ಗೋಡೆಗಳ ಮೇಲೆ ಅ0ಟಿಸಲಾಯಿತು.

ವಿಸ್ಮಯ ನ್ಯೂಸ್, ಕಾರವಾರ

Back to top button