Big NewsFocus NewsImportant
Trending

ಹಲಸಿನ ಎಲೆಯಲ್ಲಿ ರಾಷ್ಟ್ರಗೀತೆ ಬರೆದು ಸಾಧನೆ ಮಾಡಿದ ಧನ್ಯ ಹೆಗಡೆ : ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆ

ಸಿದ್ದಾಪುರ: ಹಲಸಿನ ಎಲೆಯಲ್ಲಿ ರಾಷ್ಟ್ರಗೀತೆಯನ್ನು ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರುವ ಮೂಲಕ ಸಾಧನೆ ಮಾಡಿದ್ದಾಳೆ ಕುಮಾರಿ ಧನ್ಯ ಹೆಗಡೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಳಿಯಾದ ಗುಡ್ಡೆಶಿರಗೋಡ್ ನ ಕೃಷ್ಣಮೂರ್ತಿ ಸವಿತಾ ದಂಪತಿಗಳ ಪುತ್ರಿಯಾದ ಧನ್ಯ ಹೆಗಡೆ, ಏಳು ಹಲಸಿನ ಎಲೆಯಲ್ಲಿ ರಾಷ್ಟಗೀತೆ ರಚಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ.

ಶ್ರೀ ಜಗದಂಬಾ ಪ್ರೌಢಶಾಲೆ ಸರಕುಳಿಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು , ಈಕೆಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆಗಳು ಕೇಳಿ ಬಂದಿದ್ದು, ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭಹಾರೈಸಿದ್ದಾರೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button