Follow Us On

WhatsApp Group
Focus News
Trending

ಭಟ್ಕಳದ 8 ಮಂದಿಯಲ್ಲಿ ಸೋಂಕು ಪತ್ತೆ

64 ವರ್ಷದ ಡಯಾಲಿಸಿಸ್ ರೋಗಿ ಸಾವು
63 ಮಂದಿಯ ವರದಿ ನೆಗೆಟಿವ್
9 ಮಂದಿ ಗುಣಮುಖ

ಭಟ್ಕಳ: ತಾಲೂಕಿನಲ್ಲಿ ಇಂದು ಒಟ್ಟು 8 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ. ಒಟ್ಟು 63 ಜನರ ವರದಿಯು ನೆಗೆಟಿವ್ ಬಂದಿದೆ.
ತಾಲೂಕಿನಲ್ಲಿ ಒಟ್ಟು 8 ಮಂದಿಯಲ್ಲಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ 6 ಮಂದಿ ತಾಲೂಕಿನ ಸರ್ಕಾರ ಆಸ್ಪತ್ರೆಯಲ್ಲಿ ಡಯಾಲಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟ 45 ವರ್ಷದ ಡಯಾಲಿಸಿಸ್ ರೋಗಿಯಿಂದ ಸೋಂಕು ತಗಲಿರುವ ಮಾಹಿತಿ ದೊರಕ್ಕಿದೆ.
ತಾಲೂಕಿನಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ 60,64,72 ವರ್ಷದ ವೃದ್ಧ ಹಾಗು 51,55 ವರ್ಷದ ಪುರುಷ ಮತ್ತು 42 ವರ್ಷದ ಮಹಿಳೆಯ, 34,32 ವರ್ಷದ ಯುವಕರಲ್ಲಿ ಸೋಂಕು ಪತ್ತೆಯಾಗಿದೆ
8 ಮಂದಿ ಸೋಂಕಿತರಲ್ಲಿ ಮದೀನಾ ಕಾಲೋನಿ 64 ವರ್ಷದ ವೃದ್ಧ ಇಂದು ಸಾವನ್ನಪ್ಪಿದ್ದಾನೆ. ಈ ವೃದ್ಧ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ.
ತಾಲೂಕಿನ 63 ಮಂದಿಯ ವರದಿ ಗುರುವಾರ ನೆಗೆಟಿವ್ ಬಂದಿದೆ..ಇಂದು ಒಟ್ಟು 9 ಮಂದಿ ಕೊರೋನಾ ಸೋಂಕಿನಿಂದ ಮುಕ್ತಿಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ಉದಯ ಎಸ್ ನಾಯ್ಕ ಭಟ್ಕಳ

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button