ಕರೊನಾಕ್ಕೆ ಶಿರಸಿ ಮೂಲದ ವ್ಯಕ್ತಿ ಸಾವು

ಶಿರಸಿ: ತಾಲೂಕಿನ ವೃದ್ಧರೊಬ್ಬರು ಕರೊನಾಕ್ಕೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾದ ಘಟನೆ ನಡೆದಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ವೃದ್ಧರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಜುಲೈ 14 ರಂದು ಕಳುಹಿಸಲಾಗಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿಯೇ ಅವರಿಗೆ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜುಲೈ 16 ರಂದು ಆಸ್ಪತ್ರೆಯಲ್ಲಿಯೇ ಮೃತರಾಗಿದ್ದಾರೆ.
ಅವರನ್ನು ಮಂಗಳೂರಿನಲ್ಲಿ ಮೃತರಾದ ಕೊವಿಡ್ ಪ್ರಕರಣ ಎಂದು ಮಂಗಳೂರು ಜಿಲ್ಲೆಗೆ ಪರಿಗಣಿಸಲಾಗಿದೆ

ವಿಸ್ಮಯ ನ್ಯೂಸ್ ,ಶಿರಸಿ

[sliders_pack id=”1487″]
Exit mobile version