Uttara Kannada
Trending

ಕುಮಟಾದಲ್ಲಿಂದು 30 ಕರೊನಾ ಕೇಸ್?

ಒಬ್ಬನಿಂದಲೇ 15 ಮಂದಿಗೆ ಪಾಸಿಟಿವ್
ಹಳಕಾರ್, ವಕ್ಕನಳ್ಳಿ, ಗೋಕರ್ಣ, ಧಾರೇಶ್ವರ, ಹೆಗಡೆ, ಚಿತ್ರಗಿ, ಮಣಕಿ, ಹಂದಿಗೋಣ, ಅಘನಾಶಿನಿಗೆ ಹರಡಿದ ಸೋಂಕು
ಶಿರಸಿಯಲ್ಲಿ 20ಕ್ಕಿಂತ ಹೆಚ್ಚು ಪ್ರಕರಣ?

[sliders_pack id=”2570″]

ಕುಮಟಾ: ತಾಲೂಕಿನಲ್ಲಿ ದಿನೇ ದಿನೇ ಕರೊನಾ ಆತಂಕ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಾಣುತ್ತಿದೆ. ಇಂದು ಒಂದೇ ದಿನ ಸುಮಾರು 30 ಪ್ರಕರಣ ದೃಢಪಟ್ಟಿದೆ ಎನ್ನಲಾಗಿದೆ. ಗುರುವಾರ ಒಂದೇ ಒಂದು ಪ್ರಕರಣ ಕಾಣಿಸಿಕೊಂಡಿದ್ದು, ಜನರು ಸ್ವಲ್ಪ ನಿರಾಳರಾಗಿದ್ದರು. ಆದರೆ, ತಾಲೂಕಿನಲ್ಲಿ ಇಂದು ಗರಿಷ್ಠ ಸಂಖ್ಯೆಯಲ್ಲಿ ಕರೊನಾ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಓರ್ವನ ಪ್ರಾಥಮಿಕ ಸಂಪರ್ಕದಿoದಲೇ ಸುಮಾರು 15ಕ್ಕಿಂತ ಹೆಚ್ಚಿನ ಜನರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಇವರಲ್ಲಿ ಬಹುತೇಕರು, ಖಾಸಗಿ ಹೊಟೇಲ್ ನಲ್ಲಿ ಕೆಲಸಕ್ಕೆ ಇದ್ದವರು ಎಂಬ ಮಾಹಿತಿ ಲಭಿಸಿದೆ. ಅಲ್ಲದೆ, ಕರಾವಳಿ ಕಾವಲು ಪಡೆಯ ಸಿಬ್ಬಂದಿಗೂ ಸೋಂಕು ದೃಢಪಟ್ಟಿರುವ ಮಾಹಿತಿ ಬಂದಿದೆ. (©Copyright reserved by Vismaya tv)ಉಳಿದಂತೆ ಹಳಕಾರ್, ವಕ್ಕನಳ್ಳಿ, ಗೋಕರ್ಣ, ಧಾರೇಶ್ವರ, ಹೆಗಡೆ, ಚಿತ್ರಗಿ, ಮಣಕಿ, ಹಂದಿಗೋಣ, ಮೂರೂರು ಕ್ರಾಸ್ ಸಮೀಪ ಸೇರಿದಂತೆ ಹಲವೆಡೆ ಸೋಂಕು ದೃಢಪಟ್ಟಿದೆ. ಲಡಾಕ್ ನಿಂದ ಬಂದ ಅಘನಾಶಿನಿಯ ಆರ್ಮಿಯ ವ್ಯಕ್ತಿಯೊಬ್ಬನಿಗೆ ಕೂಡಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ಶಿರಸಿಯಲ್ಲಿ 20ಕ್ಕಿಂತ ಹೆಚ್ಚು ಪ್ರಕರಣ?
ಶಿರಸಿ: ತಾಲೂಕಿನಲ್ಲಿ ಕರೊನಾ ಆರ್ಭಟ ಹೆಚ್ಚುತ್ತಲೇ ಇದೆ. ಶುಕ್ರವಾರ 20ಕ್ಕಿಂತ ಅಧಿಕ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. (©Copyright reserved by Vismaya tv)ಪಟ್ಟಣದ ಜೊತೆ ಗ್ರಾಮೀಣ ಭಾಗದಲ್ಲೂ ಮಹಾಮಾರಿಯ ನಂಜು ವ್ಯಾಪಿಸುತ್ತಿದೆ. ಬಿಸಲಕೊಪ್ಪ, ದಾಸನಕೊಪ್ಪ, ಕೋಳಿಗಾರ, ಫಾರೆಸ್ಟ್ ಕಾಲೋನಿ ಸೇರಿದಂತೆ ಹಲವೆಡೆ ಇಂದು ಸೋಂಕು ದೃಢಪಟ್ಟಿರುವ ಮಾಹಿತಿ ಬಂದಿದೆ.

ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ.

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button