Uttara Kannada
Trending

ಶ್ರಾವಣ ಸೋಮವಾರದಂದು ಹೊಸ ಸೋಂಕು ಕಾಣಿಸಿಕೊಳ್ಳದೇ ಅಂಕೋಲಾದಲ್ಲಿ ಕೊಂಚ ನಿರಾಳತೆ?

ಜುಲೈ 27 ರ ಹೆಲ್ತಬುಲೆಟಿನ್ ಪ್ರಕಾರ 23 ಸೋಂಕಿತರು ಗುಣಮುಖರಾಗಿ ಬಿಡುಗಡೆ.
ಆಂಟಿಜನ್ ಕಿಟ್ ಮೂಲಕವೂ ಅಂಕೋಲಾದಲ್ಲೇ ಪರೀಕ್ಷೆ

[sliders_pack id=”1487″]

ಅಂಕೋಲಾ : ಶ್ರಾವಣ ಮಾಸದ ಮೊದಲ ಸೋಮವಾರ ತಾಲೂಕಿನಲ್ಲಿ ಯಾವುದೇ ಹೊಸ ಕರೊನಾ ಸೋಂಕಿನ ಪ್ರಕರಣ ಕಾಣಿಸಿಕೊಳ್ಳದೇ ಜನತೆ ಕೊಂಚ ನಿರಾಳವಾಗುವಂತೆ ಮಾಡಿದೆ.
ಈವರೆಗೆ ತಾಲೂಕಿನ ಒಟ್ಟೂ 92 ಜನರಲ್ಲಿ ಸೋಂಕು ಧೃಡಪಟ್ಟಿದೆ. ಅಗಸೂರಿನ ವ್ಯಕ್ತಿಯೋರ್ವರು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶನಿವಾರದಿಂದ ಸೋಮವಾರದ ಅವಧಿಯಲ್ಲಿ ಒಟ್ಟೂ 23 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖಗೊಂಡವರ ಸಂಖ್ಯೆ 59 ಆಗಿದೆ. 24 ಸೋಂಕಿತರು ಆಸ್ಪತ್ರೆಯಲ್ಲಿ ಮತ್ತು 8 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕಿನಿಂದ ಈವರೆಗೆ 1403 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು 88 ಪರೀಕ್ಷಾ ವರದಿಗಳು ಬರಬೇಕಿದೆ. ಹೊಸ ಮಾದರಿಯ ಆಂಟಿಜನ್ ಕಿಟ್ ಮೂಲಕ ಅಂಕೋಲಾದಲ್ಲಿಯೇ ಗಂಟಲುದ್ರವ ಪರೀಕ್ಷೆ ವರದಿಯನ್ನು ಶೀಘ್ರವೇ ಪತೆಹಚ್ಚಬಹುದಾಗಿದ್ದು, ಸುಮಾರು 117 ಜನರ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button