Focus News

ಜನವರಿ 20 ರಂದು ಅಂಕೋಲಾ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ | ಮಹಿಳಾ ಸಾಹಿತಿ ಸರ್ವಾಧ್ಯಕ್ಷತೆ,. ಶಾಸಕಿ ಗೌರವಾಧ್ಯಕ್ಷತೆ

ಅಂಕೋಲಾ : ಜನವರಿ ೨೦ ರಂದು ಅಂಕೋಲಾ ತಾಲೂಕಾ ೯ ನೇ ಕನ್ನಡ ಸಾಹಿತ್ಯ ಸಮ್ಮೇಳನ ಪಟ್ಟಣದ ನಾಡವರ ಸಮುದಾಯ ಭವನ , ಗಾಂಧಿನಿವಾಸ ಅಂಕೋಲಾದಲ್ಲಿ ಹಮ್ಮಿಕೊಳ್ಳಲಾಗಿದ್ದು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಗೋಪಾಲ ಕೃಷ್ಣ ನಾಯಕ ಈ ಬಾರಿ ಮಹಿಳಾ ಪ್ರಮುಖರಲ್ಲಿ ಒಬ್ಬರಾದ ಹೊನ್ನಮ್ಮ ನಾಯಕ ಸರ್ವಾಧ್ಯಕ್ಷತೆ ವಹಿಸಲಿದ್ದು ಇದು ಕೇವಲ ಸಮ್ಮೇಳನ ಎನ್ನದೆ ನಮಗೆಲ್ಲ ಕನ್ನಡದ ಹಬ್ಬವಾಗಲಿ ಎಂದರು.

ಮನೆಯ ಪಕ್ಕ ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದವನಿಂದ ಮೊಬೈಲ್ ಕಸಿದು ಪರಾರಿಯಾದ ಅಪರಿಚಿತರು!

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರು ತಹಶೀಲ್ದಾರರೂ ಆಗಿರುವ ಉದಯ ಕುಂಬಾರ ಮಾತನಾಡಿ, ಕರ್ನಾಟಕದ ಬಾರ್ಡೋಲಿ ಎನಿಸಿರುವ ಅಂಕೋಲಾದಲ್ಲಿ ಸರ್ವರೂ ಕೂಡಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲು ಸಹಕರಿಸುವಂತೆ ಕೋರಿದರು. ಸಂಘಟನಾ ಸಮಿತಿಯ ಜಗದೀಶ ನಾಯಕ ಹೊಸ್ಕೇರಿ ಸ್ವಾಗತಿಸಿದರು.

ಗಣಪತಿ ತಾಂಡೇಲ ವಂದಿಸಿದರು. ವಿನಾಯಕ ಹೆಗಡೆ, ಬಾಲಚಂದ್ರ ನಾಯಕ, ಪ್ರಕಾಶ ನಾಯಕ, ಎಮ್. ಬಿ. ಆಗೇರ, ಜಯಶೀಲ ಆಗೇರ, ಪುಷ್ಪಾ ನಾಯ್ಕ, ಡಾ. ಅರ್ಚನಾ ನಾಯ್ಕ, ರಾಜೇಂದ್ರ ಕೇಣಿ, ರಾಘು ಕಾಕರಮಠ, ಸುಜಿತ ನಾಯ್ಕ, ಎನ್. ವಿ. ರಾಥೋಡ, ಎಸ್ ವಿ ವಸ್ತ್ರದ, ಪ್ರಕಾಶ ಕುಂಜಿ ಮತ್ತಿತರರು ಉಪಸ್ಥಿತರಿದ್ದರು.ಸಮ್ಮೇಳನದಲ್ಲಿ ಕವಿಗೋಷ್ಠಿ, ಸಾಧಕರಿಗೆ ಪುರಸ್ಕಾರ, ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಶಾಸಕಿ ರೂಪಾಲಿ ನಾಯ್ಕ ಗೌರವಾಧ್ಯಕ್ಷತೆ ವಹಿಸಲಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button