
ಹೊನ್ನಾವರ: ರಾತ್ರಿ ಸಮಯದಲ್ಲಿ ಆಕಳನ್ನು ಕದ್ದು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಸ್ಥಳೀಯರು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ಹೊನ್ನಾವರ ತಾಲೂಕಿನ ಮಾಗೋಡ ತೆಂಗಾರಿನಲ್ಲಿ ನಡೆದಿದೆ.
ಮಾಗೋಡಿನ ತೆಂಗಾರ್ ಹತ್ತಿರ ಬೆಳಗಿನ ಜಾವ ಸುಮಾರು 3 ಗಂಟೆಯ ಸುಮಾರಿಗೆ ಬುಲೇರೊ ವಾಹನದಲ್ಲಿ ಮೂವರು ದುಷ್ಕರ್ಮಿಗಳು ಅಕ್ರಮವಾಗಿ ಗೂಳಿಯನ್ನು ಸಾಗಿಸುತ್ತಿರುವಾಗ ಸ್ಥಳೀಯರು ಎಲ್ಲರಿ ಸೇರಿ ತಡೆ ಹಿಡಿದಿದ್ದಾರೆ. ಬಳಿಕ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ದಿನೇ ದಿನೇ ಗೋ ಕಳ್ಳತನ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪೋಲಿಸರು ತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾಮಹೋತ್ಸವ: ಮಾರುತಿ ಗುರೂಜಿಯವರಿಂದ ವಿಶೇಷ ಪೂಜೆ
- ಟ್ಯಾಂಕರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸ್ಥಳದಲ್ಲಿ ಲಾರಿ ನಿಲ್ಲಿಸದೇ ಓಡಿ ಹೋದ ಚಾಲಕ: ಸ್ಥಳದಲ್ಲೇ ಮೃತ ಪಟ್ಟ ಸವಾರ
- ಅಕ್ರಮವಾಗಿ ಸಾಗಾಟ: 11 ಜಾನುವಾರುಗಳ ರಕ್ಷಣೆ
- ಲಿಂಗತ್ವ ಅಲ್ಪಸಂಖ್ಯಾತರ ನೂತನ ಅಂತರoಗ ಸಂಘ ಉದ್ಘಾಟನೆ
- ನಿಲ್ಲಿಸಿಟ್ಟಿದ್ದ ಬೈಕುಗಳಿಗೆ ಓಮಿನಿ ಡಿಕ್ಕಿ: ಓರ್ವನಿಗೆ ಗಾಯ: ಮೂರು ಬೈಕ್ ಜಖಂ