Uttara Kannada
Trending

ಎಸಿಬಿ ದಾಳಿ: ಸಿಕ್ಕಿಬಿದ್ದ ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ

ಹೆಸರು ಬದಲಾವಣೆಗಾಗಿ 11 ಸಾವಿರ ಹಣಕ್ಕೆ ಬೇಡಿಕೆ
ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ತಹಶೀಲ್ದಾರ್ ಕಚೇರಿ ಅಧಿಕಾರಿ

[sliders_pack id=”1487″]

ಜೋಯ್ಡಾ: ತಹಶೀಲ್ದಾರ್ ಕಚೇರಿಯಲ್ಲಿ ಎಸಿಬಿ ದಾಳಿ ನಡೆಸಿದ್ದು, ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಹುಚ್ಚಣ್ಣನವರ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಜೊಯಿಡಾ ತಾಲೂಕಿನ ಗೊಪಿಕಾ ಶಾಂತಾ ಸಾವಂತ (53) ಇವರು ಹೆಸರು ಬದಲಾವಣೆಗಾಗಿ ಸಂಬoಧಿ ಮೋಹನ ದೇಸಾಯಿ ಅಧ್ಯಕ್ಷರು ಕಾಳಿ ಬ್ರಿಗೇಡ್ ಘಟಕ ಔರ್ಲಿ ಇವರಿಂದ 6 ಸಾವಿರ ಹಣ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಒಟ್ಟು 11 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ತಹಶೀಲ್ದಾರ್ ಕಚೇರಿಯ ಎಸ್.ಡಿ.ಎ ಮಂಜುನಾಥ ರೆಡ್ಡಿ ಹುಚ್ಚಣ್ಣನವರ ಇಂದು ಮಂಗಳವಾರ ಮೋಹನ ದೇಸಾಯಿ ಹತ್ತಿರ 6 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ತಂಡ ದಾಳಿ ಮಾಡಿದೆ. ತನಿಖೆ ಮುಂದುವರಿದಿದೆ.

ಎಸಿಬಿ ಡಿವೈಎಸ್ ಸ್ಪಿ ಶ್ರೀಕಾಂತ ಕೆ ನೇತೃತ್ವದಲ್ಲಿ ಸಿಪಿಐ ಅನಿಷ ಮುಜಾವರ, ಅಲಿ ಶೇಕ್ ಮತ್ತು ಸಿಬ್ಬಂದಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು.


ವಿಸ್ಮಯ ನ್ಯೂಸ್, ಜೋಯ್ಡಾ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button