ಜಿಲ್ಲೆಯಲ್ಲಿ ಇಂದು ಮೂವರ ಸಾವು
162 ಮಂದಿ ಗುಣಮುಖರಾಗಿ ಡಿಸ್ಚಾರ್ಜ್
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 109 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಜೋಯಿಡಾದಲ್ಲಿ 25, , ಕಾರವಾರದಲ್ಲಿ 6, ಶಿರಸಿಯಲ್ಲಿ 11, ಸಿದ್ದಾಪುರ 22, ಮುಂಡಗೋಡಿನಲ್ಲಿ 4, ಅಂಕೋಲಾದಲ್ಲಿ 10, ಕುಮಟಾದಲ್ಲಿ 9, ಹೊನ್ನಾವರದಲ್ಲಿ 4 ಹಾಗೂ ಹಳಿಯಾಳದ 18 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಇಂದು ಮೂವರ ಸಾವು:
ಇದೇ ವೇಳೆ ಇಂದು 162 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 162 ಮಂದಿ ಗುಣಮುಖರಾಗಿದ್ದು, ಕಾರವಾರದಲ್ಲಿ 34, ಅಂಕೋಲಾದಲ್ಲಿ 1, ಕುಮಟಾ 66, ಹೊನ್ನಾವರದಲ್ಲಿ 7, ಭಟ್ಕಳ 10, ಶಿರಸಿ 29, ಸಿದ್ದಾಪುರ 14, ಜೋಯಿಡಾದ ಓರ್ವ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಇಂದು ಮೂವರು ಸಾವನ್ನಪ್ಪಿದ್ದು, ಇದರಿಂದಾಗಿ ಸಾವಿನ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. ಯಲ್ಲಾಪುರ, ಹೊನ್ನಾವರ ಮತ್ತು ಕಾರವಾರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 11306 ಮಂದಿಯಲ್ಲಿ ಸೋಂಕು ದೃಢವಾಗಿದ್ದು, 9859 ಮಂದಿ ಗುಣಮುಖರಾಗಿದ್ದಾರೆ
ಶಿರಸಿಯಲ್ಲಿ 11 ಮಂದಿಗೆ ಸೋಂಕು
ಶಿರಸಿ: ತಾಲೂಕಿನಲ್ಲಿ ಇಂದು 11 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಸೋಮವಾರ ಹನುಮಂತಿಯಲ್ಲಿ 4, ಸದಾಶಿವಳ್ಳಿಯಲ್ಲಿ 2, ಬಾಳೆಗದ್ದೆಯಲ್ಲಿ 2, ವಿವೇಕಾನಂದ ನಗರದಲ್ಲಿ 2, ಇಂದಿರಾನಗರದ ಓರ್ವನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. 30 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಚಲನಚಿತ್ರ ನಟ ಶಿವರಾಜ್ ಕುಮಾರ್: ಪತ್ನಿಯೊಂದಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಕೆ
- ಕೈಕೊಟ್ಟ ಮತಯಂತ್ರ: ಮತದಾನ ಪ್ರಕ್ರಿಯೆ ತಾಸಿಗೂ ಹೆಚ್ಚು ಕಾಲ ವಿಳಂಬ
- ಆಕಸ್ಮಿಕ ಬೆಂಕಿ: ಒಂದುವರೆ ಎಕರೆಯಷ್ಟು ಅಡಕೆ ತೋಟ ನಾಶ
- Revenue Department Recruitment: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ: 21 ರಿಂದ 42 ಸಾವಿರ ವೇತನ: ಪಿಯುಸಿ ಆದವರು ಅರ್ಜಿ ಸಲ್ಲಿಸಿ