102 ಮಂದಿ ಗುಣಮುಖರಾಗಿ ಬಿಡುಗಡೆ
ಕುಮಟಾ ತಾಲೂಕಿನಲ್ಲೇ ನಾಲ್ವರ ಸಾವು
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 72 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರ 12, ಅಂಕೋಲಾ 4, ಕುಮಟಾ 8, ಹೊನ್ನಾವರ 10, ಭಟ್ಕಳ 4, ಶಿರಸಿ 3, ಸಿದ್ದಾಪುರ 5, ಯಲ್ಲಾಪುರ 2, ಮುಂಡಗೋಡಿನಲ್ಲಿ 24 ಕೇಸ್ ದಾಖಲಾಗಿದೆ.
ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 102 ಮಂದಿ ಗುಣಮುಖರಾಗಿದ್ದಾರೆ. ಕಾರವಾರ 10, ಅಂಕೋಲಾ 8, ಕುಮಟಾ 27, ಹೊನ್ನಾವರ 7, ಭಟ್ಕಳ 1, ಶಿರಸಿ 12, ಸಿದ್ದಾಪುರ 2, ಮುಂಡಗೋಡ 28, ಹಳಿಯಾಳ 5 ಮತ್ತು ಜೋಯ್ಡಾದಲ್ಲಿ ತಲಾ ಒಬ್ಬರು ಬಿಡುಗಡೆಯಾಗಿದ್ದಾರೆ.
ಇಂದು ಜಿಲ್ಲೆಯಲ್ಲಿ ನಾಲ್ಕು ಸಾವಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ಕುಮಟಾ ತಾಲೂಕಿನಲ್ಲೇ ಇಂದು ನಾಲ್ವರು ಮೃತಪಟ್ಟಿದ್ದಾರೆ. ಇಂದು 72 ಕೇಸ್ ದೃಢಪಟ್ಟ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11,705 ಕೇಸ್ ದಾಖಲಾಗಿದೆ. 646 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- Subrahmanya Dhareshwara: ಯಕ್ಷಗಾನ ಲೋಕದ ಗಾನಕೋಗಿಲೆ, ಪ್ರಯೋಗಶೀಲ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
- ಏಪ್ರಿಲ್ 28ರಂದು ಶಿರಸಿಗೆ ಆಗಮಿಸಲಿದ್ದಾರೆ ನರೇಂದ್ರ ಮೋದಿ: ಎಲ್ಲೆಲ್ಲಿ ರೋಡ್ ಶೋ?
- Job: ಶೋರೂಮ್ ನಲ್ಲಿ ಉದ್ಯೋಗಾವಕಾಶ: ಆಕರ್ಷಕ ವೇತನ: ಇಂದೇ ಅರ್ಜಿ ಸಲ್ಲಿಸಿ
- ಭೀಕರ ರಸ್ತೆ ಅಪಘಾತ: ಬೈಕಿಗೆ ಬೆಂಕಿ : ಸ್ಥಳದಲ್ಲಿಯೇ ಸುಟ್ಟು ಕರಕಲಾದ ಬೈಕ್ ಸವಾರ : ಮತ್ತಿಬ್ಬರು ಗಂಭೀರ
- ಪದ್ಮಶ್ರೀ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು: ಕಾರವಾರ ಕ್ರಿಮ್ಸ್ ಗೆ ದಾಖಲು