![](http://i0.wp.com/vismaya24x7.com/wp-content/uploads/2020/11/IMG_20201119_181928.jpg?fit=1014%2C875&ssl=1)
ಸ್ಕೂಟರ್-ಕಾರ್ ಡಿಕ್ಕಿ
ಸಿದ್ದಾಪುರ ಗ್ರಾಮಲೆಕ್ಕಾಧಿಕಾರಿ ಸಾವು
ಸಿದ್ದಾಪುರ: ತಾಲೂಕಿನ ತಹಶೀಲ್ದಾರ್ ಕಛೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಷಾ ಸಾಗರ ಆಲಳ್ಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸಾಗರ ಬಳಿಯ ಆಲಳ್ಳಿಯಲ್ಲಿ ಸ್ಕೂಟರ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಈ ಸಂದರ್ಭದಲ್ಲಿ ಉಷಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಿದ್ದಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಸಾಗರದಲ್ಲಿ ವಾಸವಾಗಿದ್ದು ಸಿದ್ದಾಪುರಕ್ಕೆ ಕಾರ್ಯನಿಮಿತ್ತ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ವಿಸ್ಮಯ ನ್ಯೂಸ್ ಸಿದ್ದಾಪುರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅಂಕೋಲಾ ದುರಂತ: ಸ್ಥಳೀಯ ಮೀನುಗಾರರ ಸಹಕಾರದಲ್ಲಿ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡದ ಕಾರ್ಯಾಚರಣೆ
- ಮುನ್ನೆಚ್ಚರಿಕಾ ಕ್ರಮ: ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ
- ಶಿರೂರು ಗುಡ್ದಕುಸಿತ ದುರಂತ : ಸ್ಮಶಾನದಲ್ಲಿ ಹೂತಿದ್ದ ಶವ ಹೊರತೆಗೆಸಿದ್ದೇಕೆ ?
- ಕಾರಿನ ಮೇಲೆ ಮರಬಿದ್ದು ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
- ಹಳದೀಪುರ,ಮುರ್ಡೇಶ್ವರ ದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರಉಚಿತ ಶಸ್ತ್ರಚಿಕಿತ್ಸೆ ಗೆ ಅರ್ಹ 15 ಜನರ ಆಯ್ಕೆ