
ಸ್ಕೂಟರ್-ಕಾರ್ ಡಿಕ್ಕಿ
ಸಿದ್ದಾಪುರ ಗ್ರಾಮಲೆಕ್ಕಾಧಿಕಾರಿ ಸಾವು
ಸಿದ್ದಾಪುರ: ತಾಲೂಕಿನ ತಹಶೀಲ್ದಾರ್ ಕಛೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಷಾ ಸಾಗರ ಆಲಳ್ಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸಾಗರ ಬಳಿಯ ಆಲಳ್ಳಿಯಲ್ಲಿ ಸ್ಕೂಟರ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಈ ಸಂದರ್ಭದಲ್ಲಿ ಉಷಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಿದ್ದಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಸಾಗರದಲ್ಲಿ ವಾಸವಾಗಿದ್ದು ಸಿದ್ದಾಪುರಕ್ಕೆ ಕಾರ್ಯನಿಮಿತ್ತ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ವಿಸ್ಮಯ ನ್ಯೂಸ್ ಸಿದ್ದಾಪುರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- Sandalwood: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧದ ತುಂಡುಗಳು ವಶಕ್ಕೆ: ಆರೋಪಿ ಪರಾರಿ
- ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ: ಮಹಾದೇವ ಬಿ ಗೌಡ ರಾಜ್ಯಮಟ್ಟಕ್ಕೆ ಆಯ್ಕೆ
- Yakshagana: ಮಲೆನಾಡಿನ ಕೋಗಿಲೆ ಎಂದೇ ಖ್ಯಾತರಾದ,ಅದ್ಭುತ ಕಂಠಸಿರಿಯ ಖ್ಯಾತ ಯಕ್ಷಗಾನ ಭಾಗವತ ಹೃದಯಾಘಾತದಿಂದ ನಿಧನ
- ಗಮನಸೆಳೆಯುತ್ತಿದ್ದಾನೆ ‘ಸೈಂಟಿಸ್ಟ್ ಗಣೇಶ’! ಗಣೇಶೋತ್ಸವದಲ್ಲಿ ಚಂದ್ರಯಾನ ಮಾದರಿ
- ಬಿಜೆಪಿಯಿಂದ ಮಹಿಳೆಯರ ವಿಶೇಷ 33% ಮೀಸಲಾಯಿ ವಿಧೇಯಕಕ್ಕೆ ಅಭಿನಂದನೆ: ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮ