Uttara Kannada
Trending

ಹೊನ್ನಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗೆ ಮುಖ್ಯಮಂತ್ರಿ ಪದಕ ಘೋಷಣೆ

ಹೊನ್ನಾವರ: ಇಲ್ಲಿನ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಲೋಕೇಶ ಅರಿಶಿನಗುಪ್ಪಿ ಅವರಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿದೆ.

ಮೂಲತಃ ಹಾವೇರಿಯವರಾದ ಲೋಕೇಶ್ ಅವರು ಸರಿಸುಮಾರು 16 ವರ್ಷಗಳಿಂದ ಹೊನ್ನಾವರ ಪೊಲೀಸಗ ಠಾಣೆಯಲ್ಲಿ ಹೊನ್ನಾವರಿಗರ ಪ್ರೀತಿ-ವಿಶ್ವಾಸಕ್ಕೆ ಕಾರಣರಾಗಿದ್ದಲ್ಲದೆ, ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ, ಅಂಕೋಲಾದ ಉದ್ಯಮಿ ದಿ. ಶ್ರೀ ಆರ್.ಎನ್. ನಾಯಕ ಕೊಲೆ ಪ್ರಕರಣ, ಕುಮಟಾ ಚೇತನ ಬ್ಯಾಂಕ್ ದರೋಡೆ ಪ್ರಕರಣ, ಹೊನ್ನಾವರ ಕರ್ಕಿ ಕೆ.ಡಿ.ಸಿ.ಸಿ ಬ್ಯಾಂಕ್ ದರೋಡೆ ಪ್ರಕರಣ ಪತ್ತೆಹಚ್ಚುವಲ್ಲಿ ಲೋಕೇಶ್ ಅವರ ಪಾತ್ರ ಮಹತ್ತರವಾದುದು.

ಕರ್ತವ್ಯವನ್ನು ನಿಭಾಯಿಸುತ್ತಾ, ಜನರ ಸ್ನೇಹಿ, ಜನಾನುರಾಗಿಯೆಂಬ ಮೆಚ್ಚುಗೆ ಗಳಿಸಿ, ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿ, ಜಿಲ್ಲೆಗೆ ಹಾಗೂ ಉತ್ತರ ಕನ್ನಡ ಪೋಲಿಸ್ ಇಲಾಖೆಗೆ ಹೆಮ್ಮೆ ತಂದ ಲೋಕೇಶರಿಗೆ ಜಿಲ್ಲೆಯ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ

Back to top button