Follow Us On

WhatsApp Group
ಮಾಹಿತಿ
Trending

ಶ್ರೀ ಮಾರಿಕಾಂಬಾ ದೇವಸ್ಥಾನದ ಸಿಬ್ಬಂದಿ ಕೃಷ್ಣ ಸಿಧ್ದೇಶ್ವರ ಅವರಿಗೆ ಬೀಳ್ಕೊಡುಗೆ

ಶಿರಸಿ : ಕಳೆದ 18 ವರ್ಷಗಳಿಂದ ಶ್ರೀ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ ಶ್ರೀ ಕೃಷ್ಣ ಗಣೇಶ ಸಿಧ್ದೇಶ್ವರ ಅವರು ಸೇವಾ ನಿವೃತ್ತಿ ಹೊಂದಿದರು. ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಧರ್ಮದರ್ಶಿ ಮಂಡಳಿ ಹಾಗೂ ಎಲ್ಲ ಸಿಬ್ಬಂದಿಯವರು ಸೇರಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಅಭಿನಂದನೆ ಸಲ್ಲಿಸಿ ಶ್ರೀ ದೇವಿಯ ಅನುಗ್ರಹಯುಕ್ತ ಪ್ರಸಾದ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಧರ್ಮದರ್ಶಿ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಅವರ ಸೇವಾ ಅವಧಿಯಲ್ಲಿ ಅವರು ಸಲ್ಲಿಸಿದ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಸಿಧ್ದೇಶ್ವರ ಅವರು ತಮ್ಮ ಸೇವಾ ಅವಧಿಯಲ್ಲಿನ ಅನುಭವ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ. ಜಿ. ನಾಯ್ಕ , ಉಪಾಧ್ಯಕ್ಷರಾದ ಶ್ರೀ ಸುದೇಶ. ಜಿ. ಜೋಗಳೇಕರ, ಧರ್ಮದರ್ಶಿಗಳಾದ ಶ್ರೀ ಸುಧೀರ. ಎಸ್. ಹಂದ್ರಾಳ ಹಾಗೂ ಶ್ರೀ ಶಿವಾನಂದ. ಎಸ್. ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಚಂದ್ರಕಾoತ. ಜಿ. ನಾಯ್ಕ ಮತ್ತು ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button