ಶಿರಸಿ: ತಾಲೂಕಿನ ಶಿರಸಿ- ಕುಮಟಾ ರಸ್ತೆಯ ಹತ್ತರಗಿ ಕ್ರಾಸ್ ಬಳಿ ಕಾಡು ಕೋಣದ ಕೊಂಬನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಮಿವುಲ್ಲಾ ಅಬ್ದುಲ್ ರೆಹಮಾನ್ ಸಾಬ್ ಎಂದು ತಿಳಿದು ಬಂದಿದೆ.
ಆರೋಪಿತ ಸಮೀವುಲ್ಲಾ ಹೆಗಡೆಕಟ್ಟಾ ಬಳಿಯವನಾಗಿದ್ದು, ಹತ್ತರಗಿ ಕ್ರಾಸ್ ಬಳಿ ಅಂದಾಜು 25 ಸಾವಿರ ರೂಪಾಯಿ ಮೌಲ್ಯದ ಕಾಡು ಕೋಣದ ಎರಡು ಕೊಂಬನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಹತ್ತಿರಗಿ ಕ್ರಾಸ್ ಬಳಿ ಖಚಿತವಾಗಿ ಅಕ್ರಮವಾಗಿ ಕಾಡು ಕೋಣದ ಕೊಂಬನ್ನು ಮಾರಾಟಕ್ಕೆ ಯತ್ನಿಸುತ್ತಿರುವ ಕುರಿತು ಖಚಿತವಾದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿತನನ್ನು ಬಂಧಿಸಿದ್ದಾರೆ.
ವಿಸ್ಮಯ ನ್ಯೂಸ್ , ಶಿರಸಿ
- ಶೆಟರ್ ಮುರಿದು ಕಳ್ಳತನ: 14 ಲಕ್ಷ ಮೌಲ್ಯದ ಚಿನ್ನ, 11 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಲೂಟಿ
- ಡಿವೈಡರ್ಗೆ ಡಿಕ್ಕಿಹೊಡೆದ ಬೈಕ್: ಸವಾರ ಸಾವು, ಇನ್ನೊರ್ವ ಗಂಭೀರ
- “ಕಾಂಗ್ರೆಸ್ಸಿನ ಅಭ್ಯರ್ಥಿ ಶ್ರೀಮತಿ ಅಂಜಲಿ ಅವರೇ”!? ವೈರಲ್ ಆದ ಮತದಾರನ ಬರಹದಲ್ಲಿ ಏನಿದೆ?
- ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಮೃತ ದೇಹ ಪತ್ತೆ
- ಗಾಂವಕರ ಮೆಮೋರಿಯಲ್ ಪೌಂಡೇಶನ್ 12ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ : ಮೇ 12 ರಂದು ಯುವ ಪ್ರತಿಭಾ ಪುರಸ್ಕಾರ