Uttara Kannada
Trending

ಕುಮಟಾ ಎಪಿಎಮ್ ಸಿಗೆ ಮೂವರ ಆಯ್ಕೆ

ಕುಮಟಾ: ಎಪಿಎಂಸಿಯ ನಾಮ ನಿರ್ದೇಶಿತ ಸದಸ್ಯರಾಗಿ ಶಾಸಕರಾದ ದಿನಕರ ಶೆಟ್ಟಿಯವರ ಆಪ್ತವಲಯದಲ್ಲಿ ಗುರುತಿಸಿಕೊಂಡ ಚಿದಾನಂದ ದೇವಪ್ಪ ನಾಯ್ಕ ಸೇರಿದಂತೆ ಮೂವರು ಆಯ್ಕೆಯಾಗಿದ್ದಾರೆ. ಚಿದಾ‌ನಂದ ದೇವಪ್ಪ ನಾಯ್ಕ ಅವರು ಪಕ್ಷಸಂಘಟನೆಯಲ್ಲಿ, ಗುರುತಿಸಿಕೊಂಡಿದ್ದು, ಪಕ್ಷದ‌ ಎಲ್ಲಾ ಕಾರ್ಯದಲ್ಲೂ ಸಕ್ರೀಯವಾಗಿದ್ದಾರೆ.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮದ ಪದದತ್ತ ಅಧಿಕಾರದ ಮೇರೆಗೆ ರಾಜ್ಯ ಸರ್ಕಾರವು ಕುಮಟಾ ಎಪಿಎಂಸಿಗೆ ಚಿದಾನಂದ ದೇವಪ್ಪ ನಾಯ್ಕ, ಬೊಬ್ಬು ದೇವು ಪಟಗಾರ ಮತ್ತು ಕಲ್ಪನಾ ಆನಂದು ದೇಶಭಂಡಾರಿ ಅವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿದೆ.

Back to top button