Focus News
Trending

ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಿಗೀತೆ ಆಡಿಯೋ ಬಿಡುಗಡೆ

ಭಟ್ಕಳ- ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಭಾವಕವಿ ಉಮೇಶ ಮುಂಡಳ್ಳಿ ಹಾಗೂ ಅವರ ಮಡದಿ ರೇಷ್ಮಾ ಉಮೇಶ ಅವರು ಬರೆದಿರುವ ಸುಮ್ಮನೆ ಇರದೆ ನಿನ್ನಾ ಸ್ಮರಿಸುವೆ ಮುಂಡಳ್ಳಿ ಅಮ್ಮ ಹಾಗೂ ಅಮ್ಮ ನನ್ನಮ್ಮ ನಿನ್ನ ಭಕುತರ ಕಾಯಮ್ಮ ಎನ್ನುವ ಎರಡು ಭಕ್ತಿಗೀತೆಗಳ ಆಡಿಯೋ ಇಂದು ಲೋಕಾರ್ಪಣೆ ಗೊಂಡಿತು.

ಉಮೇಶ ಮುಂಡಳ್ಳಿಯವರೇ ಸ್ವತಃ ಸ್ವರಸಂಯೋಜನೆ ಮಾಡಿ ಹಾಡಿರುವ ಗೀತೆಗಳನ್ನು ದೇವಸ್ಥಾನದ ವರ್ದಂತಿ ಉತ್ಸವ ಹಾಗೂ ಪಲ್ಲಕಿ ಮಹೋತ್ಸವ  ಈ ಶುಭ ಸಂದರ್ಭದಲ್ಲಿ  ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ದೇವರ ಎದುರು ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಭಟ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೇಮಂತ ಮೋಗೆರ  ಲೋಕಾರ್ಪಣೆ ಗೊಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅರ್ಚಕ ನಾಗರಾಜ ಭಟ್ ಸಾಹಿತ್ಯ ಸಂಗೀತದ ಜೋಡಿಯಾದ ದಂಪತಿಗಳಿಂದ ಇನ್ನಷ್ಟು ಸಾಹಿತ್ಯ ಸಂಗೀತ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ದೇವಸ್ಥಾನದ ವತಿಯಿಂದ ಈ ಸಂದರ್ಭದಲ್ಲಿ ಉಮೇಶ ಮುಂಡಳ್ಳಿ ದಂಪತಿಗಳನ್ನು ಸನ್ಮಾನಿಸಲಾಯಿತು.ಆಡಳಿತ ಮಂಡಳಿ ಸದಸ್ಯರಾದ ಸುರೇಶ ಆಚಾರ್ಯ, ಕವಿ ಗಾಯಕ ಉಮೇಶ ಮುಂಡಳ್ಳಿ, ಕವಯಿತ್ರಿ ರೇಷ್ಮಾ ಉಮೇಶ, ನಿನಾದ ಉತ್ಥಾನ  ಮೊದಲಾದರು ಉಪಸ್ಥಿತಿರಿದ್ದರು.

Back to top button