Uttara Kannada
Trending

ಹೊನ್ನಾವರ ಮೂಲದ ಇಬ್ಬರು ಕರೊನಾಕ್ಕೆ ಬಲಿ

ತಾಲೂಕಿನಲ್ಲಿ ಇಂದು 23 ಕರೊನಾ ಪಾಸಿಟಿವ್
ಒಂದೇ ಭಾಗದಲ್ಲಿ 15 ಕೇಸ್ ದಾಖಲು

[sliders_pack id=”3498″]

ಹೊನ್ನಾವರ; ತಾಲೂಕಿನಲ್ಲಿ ಬುಧವಾರ ಒಟ್ಟು 23 ಕರೊನಾ ಕೇಸ್ ದಾಖಲಾಗಿದೆ. ಹೋಲಿ ಕ್ರಾಸ್‍ನ ಚರ್ಚ್ ರೋಡಿನಲ್ಲೇ ಸುಮಾರು 15 ಪ್ರಕರಣ ದಾಖಲಾಗಿದೆ. ಉಳಿದಂತೆ ಕಾಸರಕೋಡಿನ 67 ವರ್ಷದ ಪುರುಷ, 65 ವರ್ಷದ ಮಹಿಳೆ, ಟೊಂಕದ 18 ವರ್ಷದ ಯುವಕ, ಹೆರಂಗಡಿಯ 35 ವರ್ಷದ ಪುರುಷ, ಅಳ್ಳಮಕಿಯ 65 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲದೆ, ಕಡ್ನೀರಿನ 28 ವರ್ಷದ ಯುವಕ, ಕಡತೋಕಾದಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಶಿಕ್ಷಕ ಮತ್ತು ಮಂಗಳವಾರ ಸೋಂಕು ದೃಢಪಟ್ಟ ಚಂದಾವರದ ಮಗುವಿನ ತಾಯಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದೇ ವೇಳೆ, ಹೊನ್ನಾವರ ಮೂಲದ ಇಬ್ಬರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಾಸರಕೋಡ ಟೋಂಕಾದ 40 ವರ್ಷದ ಪುರುಷ ಕಾರವಾರದ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಚರ್ಚ್ ಕ್ರಾಸಿನ 72 ವರ್ಷದ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button