
ಗೋಕರ್ಣ: ಅಶೋಕೆಯಲ್ಲಿ ವಿದ್ಯಾಚಾತುರ್ಮಾಸ್ಯ ಆಚರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳನ್ನು ಸಂಸದ ಅನಂತಕುಮಾರ ಹೆಗಡೆ ಕುಟುಂಬದ ಸಮೇತ ಭೇಟಿ ಮಾಡಿ ಆಶೀರ್ವಾದ ಪಡೆದರು.
ಅಶೋಕೆಯಲ್ಲಿ ಶ್ರೀಗಳ ಭೇಟಿ ಬಳಿಕ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕಾರ್ಯವನ್ನು ವೀಕ್ಷಿಸಿದರು. ಮಠದ ಮತ್ತು ಶ್ರೀಗಳ ವಿಶ್ವವಿದ್ಯಾಪೀಠದ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂತಸಪಟ್ಟರು.
ವಿಸ್ಮಯ ನ್ಯೂಸ್ ಗೋಕರ್ಣ