
ಹೊನ್ನಾವರ: ತಾಲೂಕಿನಲ್ಲಿ ಇತ್ತಿಚೆಗೆ ಕಳ್ಳತನ ಪ್ರಕರಣ ಹೆಚ್ಚುತ್ತಿದೆ. ಭಟ್ಕಳ, ಅಂಕೋಲಾ, ಕುಮಟಾ, ಹೊನ್ನಾವರ ಸೇರಿದಂತೆ ಹಲವೆಡೆ ಕಳ್ಳರು ತಮ್ಮ ಕೈಚಳಕ ತೋರುತ್ತಲೇ ಇದ್ದಾರೆ. ಈಗ ಹೊನ್ನಾವರ ತಾಲೂಕಿನ ಕಾಸರಕೋಡದ ದೇವಸ್ಥಾನವೊಂದರ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ದೇವರ ಕೊರಳಿನಲ್ಲಿದ್ದ ಸರವನ್ನೇ ಕದ್ದೊಯ್ದಿದ್ದಾರೆ.
ಹೌದು, ತಾಲೂಕಿನ ಕಾಸರಕೋಡ ಹಿರೆಮಠ ವೀರ ಮಾರುತಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ದೇವಸ್ಥಾನದ ಕಾಣಿಕೆ ಹುಂಡಿಯ ಅಂದಾಜು 7 ಸಾವಿರ ನಗದು, ದೇವರ ಕೊರಳಿನ 20 ಗ್ರಾಂ ತೂಕದ 80 ಸಾವಿರ ಮೌಲ್ಯದ ಬಂಗಾರದ ಸರವು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪಿಎಸೈ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಲಿಂಗತ್ವ ಅಲ್ಪಸಂಖ್ಯಾತರ ನೂತನ ಅಂತರoಗ ಸಂಘ ಉದ್ಘಾಟನೆ
- ನಿಲ್ಲಿಸಿಟ್ಟಿದ್ದ ಬೈಕುಗಳಿಗೆ ಓಮಿನಿ ಡಿಕ್ಕಿ: ಓರ್ವನಿಗೆ ಗಾಯ: ಮೂರು ಬೈಕ್ ಜಖಂ
- ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಸಂಪೂರ್ಣ ವಿಫಲ- ರವೀಂದ್ರ ನಾಯ್ಕ.
- ಮನೆಯ ಛಾವಣಿಯಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ: ಡ್ಯೂಟಿಗೆ ತಡವಾಗಿ ಬರುತ್ತೇನೆಂದವನು ಸಾವಿಗೆ ಶರಣಾದ
- 124 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಜಿಲ್ಲೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ?