Big News
Trending

ನಮಗೂ ಹೆಂಡತಿ ಮಕ್ಕಳು, ತಂದೆ ತಾಯಿ ಇದ್ದಾರೆ: ಆಳುವ ಜನಪ್ರತಿನಿಧಿಗಳಿಗೆ ಇದರ ಅರಿವಿದೆಯೇ? ಆಕ್ರೋಶ ಹೊರಹಾಕಿದ ಚಾಲಕರು

ಅಂಕೋಲಾ: ಹಾಲು ತರಕಾರಿ ಮತ್ತಿತರ ಆಹಾರ ಪದಾರ್ಥಗಳಿಂದ ಹಿಡಿದು, ಔಷಧ ಸಾಗಾಣಿಕೆ ವರೆಗೆ,ಆಸ್ಪತ್ರೆಯಿಂದ ಹಿಡಿದು ಶಾಪಿಂಗ್ ವರೆಗೆ ಎಲ್ಲವನ್ನೂ ಎಲ್ಲರನ್ನೂ ತಲುಪಿಸಲು ಚಾಲಕರ ಸೇವೆ ಅಗತ್ಯವಿದೆ.,ಅವರನ್ನು ಗೌರವದಿಂದ ನಡೆಸಿಕೊಳ್ಳುವ ಅಂತೇ ಆಗಬೇಕು.ನಮಗೂ ಹೆಂಡತಿ ಮಕ್ಕಳು, ತಂದೆ ತಾಯಿಗಳಿದ್ದಾರೆ. ನಾವು ನಮ್ಮ ಕುಟುಂಬದ ಸ್ಥಿತಿ ಯೋಚಿಸಬೇಕಲ್ಲವೆ? ಆಳುವ ಜನಪ್ರತಿನಿಧಿಗಳಿಗೆ ಇದರ ಅರಿವಿದೆಯೇ? ಎಂದು ಪ್ರಶ್ನಿಸುತ್ತಿದ್ದಾರೆ ಇವರು.

ಯಲ್ಲಾಪುರ ಅರೆಬೈಲ್ ಘಾಟ್ ಬಳಿ, ಹೆದ್ದಾರಿ ಅಂಚಿನ ಭೂಕುಸಿತದ ಪರಿಣಾಮ ಅಂಕೋಲಾ ಹುಬ್ಬಳ್ಳಿ ಮಾರ್ಗದಲ್ಲಿ ತಾತ್ಕಾಲಿಕವಾಗಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ವಿಷಮ ಪರಿಸ್ಥಿತಿಯಿಂದ ಕಂಗಾಲಾಗಿರುವ ಕೆಲಸ ಲಾರಿ ಚಾಲಕ ಹಾಗೂ ಸಹಾಯಕರು,ಹೆದ್ದಾರಿ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಇಲ್ಲವೇ ತಮಗೆ ವಿಷ ನೀಡಿ ಎಂದು ಸಂಬoಧಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಠಾತ್ ರಸ್ತೆ ತಡೆ ನಡೆಸಿದ ಘಟನೆ ಇಂದು ನಡೆದಿದೆ.

ಅಂಕೋಲಾ ಹುಬ್ಬಳ್ಳಿ ಮಾರ್ಗಮಧ್ಯೆ ಯಲ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಅಂಚಿನ ಭೂಕುಸಿತದ ಪರಿಣಾಮ, ರಸ್ತೆ ಸಂಪರ್ಕ ಸಮಸ್ಯೆ ತಲೆದೋರಿದೆ.ಮತ್ತೆ ಮತ್ತೆ ರಸ್ತೆಯಂಚಿನಲ್ಲಿ ಬಿರುಕು, ಭೂಕುಸಿತ ಕಂಡು ಬಂದ ಪರಿಣಾಮ ಲಘು ವಾಹನಗಳನ್ನು ಹೊರತುಪಡಿಸಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.ಭೂಕುಸಿತ ಪ್ರದೇಶದಲ್ಲಿ ಹೆದ್ದಾರಿ ತಾತ್ಕಾಲಿಕ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಅಂಕೋಲಾ ಬಾಳೆಗುಳಿ ಬಳಿ ಹೆದ್ದಾರಿ ಅಂಚಿನಲ್ಲಿಯೇ ನಿಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿರುವ ಭಾರಿ ವಾಹನ ಚಾಲಕರು ಹಾಗೂ ಸಹಾಯಕರು ಸಂಕಷ್ಟ ಅನುಭವಿಸುವಂತಾಗಿದೆ.

ಹೆದ್ದಾರಿ ಸಮಸ್ಯೆ ಸರಿಗೊಂಡು ತಮ್ಮ ಯೋಜಿತ ಕಾರ್ಯ ಮುಗಿಸಿ,ಮನೆ ಕುಟುಂಬ ಸೇರಬೇಕೆಂಬ ಒತ್ತಡದಲ್ಲಿರುವ ಹಲವು ಚಾಲಕ ಹಾಗೂ ಸಹಾಯಕರು , ಇಂದಲ್ಲ ನಾಳೆ ತಮಗೆ ಸಂಚಾರಕ್ಕೆ ಅನುಮತಿ ದೊರೆಯಬಹುದೆಂದು ಕಾಯುತ್ತಲೇ ಎರಡು ವಾರಗಳನ್ನು ಕಳೆದಿದ್ದಾರೆ. ಆದರೂ ಹೆದ್ದಾರಿ ವ್ಯವಸ್ಥೆ ಸರಿ ಗೊಳ್ಳದ ಹಿನ್ನೆಲೆಯಲ್ಲಿ, ನೂರಾರು ಚಾಲಕ ಹಾಗೂ ಸಹಾಯಕರು, ಬಾಳೆಗುಳಿ ಬಳಿ ಅಂಕೋಲಾ ಹುಬ್ಬಳ್ಳಿ ಮುಖ್ಯ ಹೆದ್ದಾರಿಯ ಪ್ರವೇಶದ್ವಾರದ ಬಳಿ ಹಠಾತ್ ಪ್ರತಿಭಟನೆ ನಡೆಸಿ, ಇತರೆ ವಾಹನಗಳ ರಸ್ತೆ ಸಂಚಾರಕ್ಕೂ ತಡೆ ಒಡ್ಡುವ ಎಚ್ಚರಿಕೆ ನೀಡಿದರು.

ಈ ಕುರಿತ ವಿವರವಾದ ಸುದ್ದಿಯನ್ನು ಇಂದು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button