Focus News
Trending

ಕೊನೆಗೂ ಸಿಕ್ಕಿಬಿದ್ದ ಬೈಕ್ ಕಳ್ಳರು: ಆರೋಪಿಗಳಿಗೆ ನ್ಯಾಯಾಂಗ ಬಂಧನ

ಭಟ್ಕಳ: ತಾಲೂಕಿನ ಮಾವಿನಕುರ್ವೆ ಬಂದರಿನ ಎನ್.ಕೆ. ಫೆಡರೇಶನ್ ಡಿಸೇಲ್ ಬಂಕಿನ ಬಳಿ ನಿಲ್ಲಿಸಲಾಗಿದ್ದ ಹೀರೋ ಹೊಂಡಾ ಕಂಪೆನಿಯ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳನ್ನು ತಾಲೂಕಿನ ಹೆಬಳೆ ಗ್ರಾಪಂ ಹನೀಫಾಬಾದ್ 3ನೇ ಕ್ರಾಸ್‌ನ ನಿವಾಸಿಗಳಾದ ಮಹ್ಮದ್ ಮುಝಾಮಿಲ್ ನಿಸಾರ್ ಅಹ್ಮದ್ ಜಂಗೇರಿ ಯಾನೆ ಇಬ್ಬಿ ಮಜ್ಜು (21) ಹಾಗೂ ಹನೀಫಾಬಾದ್ ತಲ್ಲಾ ಫಳ್ಳಿಯ ಹತ್ತಿರದ ನಿವಾಸಿ ನಿಯಾಮತ್ ಬುಡಾನ್ ಶೇಖ್ (24) ಎಂದು ಗುರುತಿಸಲಾಗಿದೆ.

ಡಿಸೇಲ್ ಬಂಕಿನಲ್ಲಿ ಕೆಲಸ ಮಾಡಿಕೊಂಡಿದ್ದ ಮಹೇಶ ವೆಂಕಟ್ರಮಣ ಮೊಗೇರ ಎಂಬುವವರು, ಕಳೆದ ಸೆ.23ರ ರಾತ್ರಿ 10-30 ಗಂಟೆಯಿoದ ಸೆ.24ರ ಬೆಳಗಿನ ಜಾವ 2 ಗಂಟೆಯ ಅವಧಿಯಲ್ಲಿ ಬಂಕಿನ ಸಮೀಪ ನಿಲ್ಲಿಸಲಾಗಿದ್ದ ಬೈಕ್ ಕಳ್ಳತನ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಎಡಿಶನಲ್ ಎಸ್ಪಿ ಎಸ್.ಬದ್ರಿನಾಥ, ಡಿವಾಯ್‌ಎಸ್ಪಿ ಕೆ.ಯು.ಬೆಳ್ಳಿಯಪ್ಪರವರ ನಿರ್ದೇಶನದಂತೆ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ ಪಿ.ಎಮ್. ನೇತೃತ್ವದಲ್ಲಿ ಎಸೈ ಭರತ್, ಎಸ್‌ಐ ರತ್ನಾ ಕುರಿ, ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ಗೊಂಡ, ನಿಂಗನ ಗೌಡ ಪಾಟೀಲ್, ಚಂದ್ರಕಾoತ ಕುಂಬಾರ, ದಿನೇಶ ನಾಯಕ, ಲೋಕಪ್ಪ ಕಶ್ ಕತ್ತಿ, ಈರಣ್ಣ, ನಾಗರಾಜ ಮೊಗೇರ ಅವರನ್ನು ಒಳಗೊಂಡ ತಂಡ ತನಿಖೆ ಕೈಗೊಂಡಿತ್ತು. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button