![](http://i0.wp.com/vismaya24x7.com/wp-content/uploads/2020/08/india.jpg?fit=640%2C338&ssl=1)
ಹೊದ್ದು ಮಲಗದೆ ಎಚ್ಚರಾಗಿರಿ
ಎದ್ದು ನಿಲ್ಲಿರಿ ನಿಲ್ಲಿರಿ
ದೇಶ ಪ್ರೇಮದ ಬಿಸಿಯ ನೆತ್ತರು
ಮಾತೆಗರ್ಪಿತವಾಗಲಿ
ಭರತ ಭೂಮಿಯಲ್ಲಿ ಭರತನಂತೆ
ಗರ್ವದಿಂದಲೇ ಗರ್ಜಿಸಿ
ಸೋಲನೆಂದಿಗೂ ಒಪ್ಪಿಕೊಳ್ಳದೆ
ನಮ್ಮ ತನವನು ತೋರಿಸಿ
ಒಳಗು ಹೊರಗಣ ದೇಶದ್ರೋಹಿಯ
ಮರ್ಮವನು ಸದಾ ಅರಿಯಿರಿ
ಕುಟಿಲತನದ ಕಪಟ ಮೋಸಕ್ಕೆ
ಸಿಲುಕದಂತೆ ನೋಡಿರಿ
ಹೇಡಿಯಂತೆ ತಿರುತಿರುಗಿ ಓಡದೆ
ಮುಂದೆ ಮುಂದೆಯೇ ಸಾಗಿರಿ
ಗೆಲುವು ನಮ್ಮನ್ನು ಅಪ್ಪುವರೆಗೆ
ಗುರಿಯನೊಂದೆಯೇ ನೋಡಿರಿ
ಉಮೇಶ ಮುಂಡಳ್ಳಿ ಭಟ್ಕಳ
![](http://i0.wp.com/vismaya24x7.com/wp-content/uploads/2020/08/IMG-20200725-WA0001.jpg?resize=537%2C842&ssl=1)