Focus News
Trending

ಜನಮಂಗಲ’ಕಾರ್ಯಕ್ರಮದ ಅಡಿಯಲ್ಲಿ ಗುಣವಂತೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ  ಸೌಲಭ್ಯ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ “ಜನ ಮಂಗಲ ” ಕಾರ್ಯಕ್ರಮ  ಹೊನ್ನಾವರ ತಾಲೂಕಿನ ಗುಣವಂತೆಯ ಆಕಸ್ಮಿಕ ಅನಾರೋಗ್ಯಕ್ಕೆ ಗುರಿಯಾಗಿದ್ದ ಈಶ್ವರ ನಾಯ್ಕ್ ಇವರಿಗೆ 20 ಸಾವಿರ ರೂಪಾಯಿ ನಗದು ಹಾಗೂ ವಿಲ್ ಚೇರ ವಿತರಣಾ ಕಾರ್ಯಕ್ರಮ ಗ್ರಾಮಾಭಿವೃದ್ದಿ ಯೋಜನೆಯಿಂದ ಜರುಗಿತು.

ಸಂಘದ ಜಿಲ್ಲಾ ನಿರ್ದೇಶಕರಾದ ಮಹೇಶ ಎಂ ಡಿ ಮಾತಾಡಿ ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗಲು ಮಾನವೀಯ ಯೋಜನೆ “ಜನ ಮಂಗಳ ” ಕಾರ್ಯಕ್ರಮವಾಗಿದೆ.  ಬೇರೆ ಬೇರೆ ಕಾರಣಕ್ಕೆ ಯಾರಿಗೆ ಸರ್ಕಾರದಿಂದ ಈ ಸೌಲಭ್ಯ ಪಡೆಯಲು ಆಗುವುದಿಲ್ಲವೋ ಅಂತ ಜನರಿಗೆ ಸೌಲಭ್ಯ ನೀಡುವುದಾಗಿದೆ. ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ, ಅಂಕೋಲಾ, ಹಾಗೂ ಬೈಂದೂರ ಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ.

ವಿಕಲ ಚೇತನರಿಗೆ ವಿಲ್ ಚೇರ್, ಸ್ಟಿಕ್, ವಾಟರ್ ಬ್ಯಾಗ್ ಮೊದಲಾದವುಗಳನ್ನು ನೀಡಲಾಗುತ್ತದೆ.ಜಿಲ್ಲೆಯಲ್ಲಿ 30ಕ್ಕೂ ಅಧಿಕ ಜನರಿಗೆ ವಿತರಿಸಿದ್ದು, 60 ಸಾವಿರಕ್ಕೂ ಹೆಚ್ಚಿಗೆ‌ ಆರ್ಥಿಕ ಸಹಾಯ ಮಾಡಲಾಗಿದೆ  ಎಂದರು.

Back to top button