Important
Trending

ಸಣ್ಣ ಸಣ್ಣ ಗೂಡಂಗಡಿಗಳೇ ಈತನ ಟಾರ್ಗೆಟ್: ಮೇಲ್ಛಾವಣಿ ಮುರಿದು ಅಂಗಡಿಯೊಳಗೆ ನುಗ್ಗುತ್ತಿದ್ದ ಖತರ್ನಾಕ್ ಕಳ್ಳ ಅಂದರ್

ದಾoಡೇಲಿ: ನಗರದ ವಿವಿಧೆಡೆಗಳಲ್ಲಿ ಗೂಡಂಗಡಿಗಳನ್ನು ಮತ್ತು ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ. ನಗರದ ಸಂಡೆ ಮಾರ್ಕೆಟ್ ಹತ್ತಿರದ ಮೊಬೈಲ್ ದುರಸ್ತಿ ಅಂಗಡಿಯಲ್ಲಿ ಅಂಗಡಿಯ ಮೇಲ್ಚಾವಣಿ ಮುರಿದು ಅಂಗಡಿಯೊಳಗೆ ಹೊಕ್ಕಿ ಮೊಬೈಲ್ ಗಳನ್ನು ಹಾಗೂ ವಿವಿಧ ಮೊಬೈಲ್ ಗಳ ಬ್ಯಾಟರಿಗಳನ್ನು ಮತ್ತು ನಗದು ಕಳವು ಮಾಡಲಾಗಿತ್ತು.

ಈ ದೂರಿನ ಹಿನ್ನಲೆಯಲ್ಲಿ ನಗರ ಠಾಣೆಯ ಪಿಎಸೈ ಯಲ್ಲಪ್ಪ ಎಸ್. ನೇತೃತ್ವದ ಪೊಲೀಸರ ತಂಡ ಆರೋಪಿಯ ಜಾಡನ್ನು ಬೆನ್ನತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡ ಆರೋಪಿ ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶದ ಶಿವ ಯಾನೆ ಶಿವಕುಮಾರ್ ಎಂಬಾತನಾಗಿದ್ದಾನೆ. ಆರೋಪಿಯನ್ನು ಬಂಧಿಸಿ ತನಿಖೆಗೊಳಪಡಿಸಿದಾಗ ಈ ಹಿಂದೆ ನಗರದ ವಿವಿಧ ಗೂಡಂಗಡಿ ಹಾಗೂ ಸಣ್ಣ ಸಣ್ಣ ಅಂಗಡಿಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆoದು ಮಾಹಿತಿ ಲಭ್ಯವಾಗಿದೆ.

ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಿಎಸೈ ಯಲ್ಲಪ್ಪ ಎಸ್. ಅವರ ನೇತೃತ್ವದ ತಂಡದಲ್ಲಿ ಪೊಲೀಸ್ ಸಿಬ್ಬಂದಿ ಭೀಮಪ್ಪ, ಪ್ರಶಾಂತ ನಾಯ್ಕ, ಜಯನ್ ಗೌಡ, ಆದಪ್ಪ ಧಾರವಾಡ್ಕರ್, ಚಿನ್ಮಯ ಭಾಗವಹಿಸಿದ್ದರು. ಕಳೆದ ಆರೇಳು ತಿಂಗಳುಗಳಿAದ ನಗರದ ವಿವಿಧ ಗೂಡಂಗಡಿ ಹಾಗೂ ಸಣ್ಣ ಸಣ್ಣ ಅಂಗಡಿಗಳಲ್ಲಿ ಕಳ್ಳತನ ನಡೆಸುವುದರ ಮೂಲಕ ನಗರದ ಜನತೆಯ ನಿದ್ದೆಗೆಡಿಸಿದ ಕಳ್ಳನನ್ನು ಬಂಧಿಸುವಲ್ಲಿ ನಗರದ ಪೊಲೀಸರ ತಂಡ ಯಶಸ್ವಿಯಾಗಿದ್ದು, ಕಳ್ಳನನ್ನು ಹಿಡಿದಿರುವುದಕ್ಕೆ ನಗರದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button