ದೇವರಿಗೇ ಪತ್ರ ಬರೆದ ಮಹಿಳೆಯರು: ಗಂಡನಿಗೆ ಬುದ್ಧಿ ಕೊಟ್ಟು ನನ್ನ ಜತೆ ಸಂಸಾರ ಮಾಡಲು ಕಳುಹಿಸು: ಇಲ್ಲದಿದ್ದರೆ ನೀನೇ ಹೊಣೆ !

ದೇವರಿಗೆ ಪ್ರತ್ಯೇಕವಾಗಿ ಪತ್ರಬರೆದ ಇಬ್ಬರು ಮಹಿಳೆಯರು
ಸಂಸಾರ ಸರಿಪಡಿಸುವಂತೆ ಮನವಿ
ಇಲ್ಲದಿದ್ರೆ ನೀನೇ ಹೊಣೆ ಎಂದು ಎಚ್ಚರಿಕೆ!
ದೇವರಿಗೆ ಭಕ್ತೆಯರಿಬ್ಬರ ಭಕ್ತಿಪೂರ್ವಕ ಆಗ್ರಹ

ದೇವರಿಗೆ ಬರೆದ ಪತ್ರ

ಸಾಮಾನ್ಯವಾಗಿ ದೇವಸ್ಥಾನಕ್ಕೆ ತೆರಳಿ ಸಂಕಷ್ಟಗಳನ್ನು ಪರಿಸರಿಸಿಕೊಂಡು ಅಂತ ಹೇಳುವುದುನ್ನು ನೋಡಿದ್ದೇವೆ. ಕೇಳಿದ್ದೇವೆ. ಕೆಲವು ಭಕ್ತರು ಹರಕೆ ಹೇಳಿಕೊಳ್ಳುವುದು ಉಂಟು. ಆದರೆ, ಈ ಇದು ಸ್ವಲ್ಪ ಡಿಫರೆಂಟ್ ಮ್ಯಾಟರ್.. ಕೌಟುಂಬಿಕ ಕಲಹದಿಂದ ಮನನೊಂದಿರುವ ಇಬ್ಬರು ಮಹಿಳಾ ಭಕ್ತೆಯಬ್ಬರಿಬ್ಬರು ಪ್ರತ್ಯೇಕವಾಗಿ ದೇವರಿಗೆ ವಿಶೇಷವಾಗಿ ಪತ್ರಬರೆದಿದ್ದಾರೆ. ಹುಂಡಿ ಎಣಿಕೆ ಮಾಡುವಾಗ ಸಿಕ್ಕಿದ ಮಹಿಳೆಯ ಪತ್ರ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಪತ್ರ ಓದಿದ ಮುಜರಾಯಿ ಇಲಾಖೆ ಅಧಿಕಾರಿಗಳು ಕ್ಷಣಕಾಲ ಯೋಚಿಸುವಂತಾಗಿದೆ.

ಹೌದು, ತಮ್ಮನ್ನು ಬಿಟ್ಟು ಹೋಗಿರುವ ಗಂಡಂದಿರು ಮತ್ತೆ ಮರಳಿ ಮನೆಗೆ ಬರುವಂತೆ ದೇವರಿಗೆ ಪ್ರತ್ಯೇಕವಾಗಿ ಇಬ್ಬರು ಮಹಿಳೆಯರು ಪತ್ರ ಬರೆದಿದ್ದಾರೆ, ಮನದಾಳ ತೋಡಿಕೊಂಡಿದ್ದಾರೆ. ಕೊಳ್ಳೇಗಾಲ ಪಟ್ಟಣದ ನಾರಾಯಣಸ್ವಾಮಿ ದೇವಸ್ಥಾನದ ಹುಂಡಿಯ ಹಣ ಎಣಿಕೆ ಮಾಡುವಾಗ ಈ ಪತ್ರ ಸಿಕ್ಕಿದೆ.

ಹೌದು, ಬಿಟ್ಟೋಗಿರುವ ಗಂಡ ಮನೆಗೆ ಬರುವಂತೆ ದೇವರಿಗೆ ಪ್ರತ್ಯೇಕವಾಗಿ ಇಬ್ಬರು ಮಹಿಳೆಯರು ಪತ್ರ ಬರೆದಿದ್ದಾರೆ. ನನ್ನ ಯಜಮಾನರು ಜಗಳವಾಡಿಕೊಂಡು ಬಿಟ್ಟು ಹೋಗಿದ್ದಾನೆ. ಓ ದೇವರೇ, ನನ್ನ ಗಂಡನಿಗೆ ಒಳ್ಳೆ ಬುದ್ಧಿ ಕೊಟ್ಟು ನನ್ನ ಜತೆ ಸಂಸಾರ ಮಾಡಲು ಕಳುಹಿಸು. ಆತನ ಮುಂದೆ ಯಾವಾಗಲೂ ಇರಲಿ. ನಾನು ಹೇಳಿದಂತೆ ನನ್ನ ಗಂಡ ಕೇಳಲಿ. ಇದೊಂದು ನನ್ನ ಬೇಡಿಕೆಯನ್ನು ಈಡೇರಿಸಿಕೊಡು ದೇವರೇ ಎಂದು ಭಕ್ತೆ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. ಅಷ್ಟೇ ಅಲ್ಲದೆ ‘ಇಲ್ಲದಿದ್ದರೆ ನೀನೇ ಹೊಣೆ ‘ ಎಂಬ ಬೆದರಿಕೆಯನ್ನು ದೇವರಿಗೆ ಹಾಕಿದ್ದಾಳೆ.

ಪತ್ರದಲ್ಲಿ ಮಹಿಳೆಯರ ಫೋನ್ ನಂಬರ್ ಇಲ್ಲ. ವಿಳಾಸವೂ ಇಲ್ಲ. ದೇವರಿಗೆ ನಾವು ವಾಸವಿರುವ ಮನೆ, ಕ್ರಾಸ್, ಅದರ ಅಡ್ರಸ್ಸು, ಲ್ಯಾಂಡ್ ಮಾರ್ಕ್ ಯಾವ ಡೀಟೇಲ್ಸ್ ಕೊಡಬೇಕಾದ ಅಗತ್ಯವಿಲ್ಲ ಎಂಬುದು ಮಹಿಳಾ ಭಕ್ತರ ಮನದಾಳವಾಗಿರಬೇಕು. ಈ ಹಿಂದೆಯೂ ಇದೇ ರೀತಿ ದೇವರಿಗೆ ಅನೇಕ ರೀತಿಯ ಪತ್ರ ಹಾಗೂ ವಿಚಿತ್ರ ಹರಕೆ ಮಾಡಿರುವುದು ವರದಿಯಾಗಿದ್ದು ಇದೀಗ ಮಹಿಳೆಯರ ಪತ್ರ ವೈರಲ್ ಆಗಿದೆ.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )  ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version