Big NewsImportant
Trending

ಚಾಕುವಿನಿಂದ ಕಂಡಕoಡಲ್ಲಿ ಹೆಂಡತಿ ಮೇಲೆ ಹಲ್ಲೆ ಮಾಡಿದ ಗಂಡ: ತಮ್ಮನಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು:

ಹೊನ್ನಾವರ: ಪತಿಯೊಯೊಬ್ಬ ಕಟ್ಟಿಕೊಂಡ ಪತ್ನಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕಡತೋಕಾದಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹಲ್ಲೆ ನಡಸಿದ ಗಂಡನನ್ನು ಪೋಲಿಸರು ಬಂಧಿಸಿದ್ದಾರೆ. ಹೊನ್ನಾವರ ತಾಲೂಕಿನ ಕಡತೋಕಾ ನಿವಾಸಿ ಮಂಜುನಾಥ ವೆಂಕಟ್ರಮಣ ಶೆಟ್ಟಿ ಬಂಧಿತ ಆರೋಪಿ. ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನನ್ನ ತಮ್ಮ ಮಂಜುನಾಥ ವೆಂಕಟ್ರಮಣ ಶೆಟ್ಟಿ ಈತನ ಮೊದಲನಿಂದಲೂ ಅವನ ಹೆಂಡತಿ ಆಶಾಳಗೆ ಸಂಶಯದಿoದ ನೋಡುವದು, ವಿನಾಕಾರಣ ಅವಳಿಗೆ ಕಿರುಕುಳ ನೀಡುವದು ಮಾಡುತ್ತಾ ಬಂದಿರುತ್ತಾನೆ. ಈ ಬಗ್ಗೆ ನಾವು ಅಣ್ಣತಮ್ಮಂದಿರು ಬಹಳ ಸಲ ಬುದ್ದಿವಾದ ಹೇಳದ್ದೇವು. ಆದರು ಅವನು ಹೇಳಿದ ಮಾತನ್ನು ಕೇಳದೆ ಮತ್ತೆ ಅವನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದಾರೆ,

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button