Important
Trending

ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸ್ಥಳದಲ್ಲೇ ಮಹಿಳೆ ಸಾವು

ಶಿರಸಿ: ಪಾದಾಚಾರಿ ಮಹಿಳೆಯೊಬ್ಬಳಿಗೆ ಮಹೇಂದ್ರಾ ಥಾರ್ ಡಿಕ್ಕಿಯಾದ ಪರಿಣಾಮ ಮಹಿಳೆಯು ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಯಡಳ್ಳಿ ಸಮೀಪದ ಬೆಳ್ಳೇಕೇರಿ ಬಳಿ ನಡೆದಿದೆ. ಶಿರಸಿಯ ಗಿಡಮಾವಿನಕಟ್ಟಾದ ಮೋಹಿನ ನಾರಾಯಣ ನಾಯ್ಕ ಮೃತ ಮಹಿಳೆ. ಆರೋಪಿತ ಮಹೇಂದ್ರಾ ಥಾರ್ ಚಾಲಕ ಹೊಸಪೇಟೆ ರಸ್ತೆ ನಿವಾಸಿ ವೆಂಕಟ್ರಮಣ ಶಾನಭಾಗ ಶಿರಸಿ ಕಡೆಯಿಂದ ಸಿದ್ದಾಪುರ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿ ವಾಹನದ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ, ಬೆಳ್ಳಿಕೇರೆ ಕ್ರಾಸ್ ಹತ್ತಿರ ರಸ್ತೆಯ ಎಡಬದಿಯಿಂದ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿoದ ಡಿಕ್ಕಿಪಡಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button