ಭಟ್ಕಳ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಂದರ ಮಾವಿನಕುರ್ವೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ನಟರಾಜ ದೇವಪ್ಪ ಖಾರ್ವಿ (29) ಎಂದು ತಿಳಿದು ಬಂದಿದೆ. ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ. ಸಂಜೆ 5 ಗಂಟೆಯ ಸುಮಾರಿಗೆ ಮನೆಗೆ ಬಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಮನೆಯವರು ಕರೆದರೂ ಕೂಡಾ ಮಾತನಾಡದೇ ಇರುವುದರಿಂದ ಸಂಶಯಗೊoಡು ಬಾಗಿಲು ಒಡೆದು ನೋಡಿದಾಗ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಈತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಪೊಲೀಸರು ಆತನ ಸಹೋದರ ಉದಯ ದೇವಪ್ಪ ಖಾರ್ವಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ತಂಗುದಾಣವಿಲ್ಲದೇ ಸಾರ್ವಜನಿಕರ ಪರದಾಟ – ತೆಂಗಿನ ಗರಿಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಿದ ಮಹಿಳೆಯರು
- ದರ್ಶನ ಪಾತ್ರಿಯ ದೈವದ ಮಾತಿಗೆ ಕಿವಿಯಾದ ಭಕ್ತರು: ಸಮುದ್ರ ತೀರಕ್ಕೆ ಬಂದು ಹರಕೆ ಸಮರ್ಪಣೆ
- ಕ್ರಿಕೆಟ್ ಆಟ ಆಡುವ ವೇಳೆ ಸಿಡಿಲು ಬಡಿದು ಯುವಕ ಸಾವು
- ಮಧ್ಯರಾತ್ರಿಯ ವೇಳೆ ದನಗಳ್ಳರ ಕರಾಮತ್ತು: ಸಿಸಿಟಿವಿಯಲ್ಲಿ ಸೆರೆಯಾಗಿದೆ ಗೋಗಳ್ಳತನ ದೃಶ್ಯ
- ನದಿಗೆ ಈಜಲು ಹೋದ ವೇಳೆ ದುರ್ಘಟನೆ: ನೀರುಪಾಲಾದ ಯುವಕ: ರಕ್ಷಣೆಗೆ ಧಾವಿಸಿದ ಮಹಿಳೆಯೂ ನದಿಯಲ್ಲಿ ಮುಳುಗಿ ಸಾವು