Important
Trending

ಮನೆಯಂಗಳಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಕಾಂಕ್ರೀಟ್ ರಿಂಗ್ ಬಿದ್ದು ಪುಟ್ಟ ಬಾಲಕಿ ಸಾವು

ಗಂಭೀರವಾಗಿ ಗಾಯಗೊಂಡ ಬಾಲಕಿ
ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರು

ಹೊನ್ನಾವರ: ಮನೆಯ ಎದುರು ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಕಾಂಕ್ರೀಟ್ ರಿಂಗ್ ಬಿದ್ದು ಆರು ವರ್ಷ ಬಾಲಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಸಂಭವಿಸಿದೆ. ಪುಟ್ಟ ಬಾಲಕಿ ಸಂಜೆ ಹೊತ್ತು ತನ್ನ ಮನೆಯ ಅಂಗಳದಲ್ಲಿ ಉಳಿದ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಮಕ್ಕಳು ಆಟವಾಡುತ್ತಿರುವುದನ್ನು ನೋಡಿ ಮನೆಯವರು ಸಂತಸದಲ್ಲಿದ್ದರು. ಆದರೆ, ವಿಧಿಯಾಟವೇ ಬೇರೆಯದಾಗಿತ್ತು. ಹೀಗೆಯ ಮನೆಯ ಎದುರೇ ಉಳಿದ ಮಕ್ಕಳೊಂದಿಗೆ ಆಟವಾಡುತ್ತಿರುವಾಗ ಯಾವುದೋ ಕೆಲಸಕ್ಕೆಂದು ಮಾಡಿ ಇಟ್ಟಿದ್ದ ಕಾಂಕ್ರೀಟ್ ರಿಂಗ್ ಮಗುವಿನ ಮೈಮೇಲೆ ಬಿದ್ದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ತಾಲೂಕಾಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತು. ಆದರೆ, ತಾಲೂಕಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಚಾತುರ್ಯದಿಂದಾಗಿ ಈ ಘಟನೆ ನಡೆದಿದ್ದು, ಈಗ ಮನೆಯವರು , ಕುಟುಂಬದವರು ಪರಿತಪಿಸುವಂತಾಗಿದೆ. ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದ ಬಾಲಕಿ ಅಲ್ಲೆ ಸಾವನ್ನಪ್ಪಿರುವುದು ಮನೆಯವರ ದು:ಖಕ್ಕೆ ಕಾರಣವಾಗಿದೆ.

ನಿಮ್ಮ ಜೀವನದ ತೊಂದರೆಗಳಾದ ಮಾಟ ಮಂತ್ರ, ಕೆಟ್ಟ ಚಾಳಿ, ಪ್ರೇಮ ಕಲಹ, ದಾಂಪತ್ಯ ಕಲಹ, ಕುಟುಂಬ ತೊಂದರೆ, ವ್ಯವಹಾರದ ತೊಂದರೆ, ಬೋಟಿನ ತೊಂದರೆ, ದೋಣಿಯ ತೊಂದರೆ,ಹಾಗೂ ಇತರೆ ತೊಂದರೆಗೆ ಪರಿಹಾರ ಮಾಡಿಕೊಡಲಾಗುವುದು. ಇದರಲ್ಲದೆ ಮನೆಗೆ ರಕ್ಷಣೆಯ ಕಾಯಿ, ಮಕ್ಕಳಿಗೆ ಯಂತ್ರ ಮಾಡಿಕೊಡಲಾಗುವುದು ಮತ್ತು ಬಾವಿಯ ಜಲ ತೋರಿಸುದು ,ಮನೆ ಕಟ್ಟಲು ಸೂಕ್ತ ವಾದ ಸ್ಥಳ ಗುರುತಿಸಿಕೊಡಲಾಗುವುದು ಹಾಗೂ ಮನೆಯಲ್ಲಿ ನಾಗ ಚೌಡಿ ಇತರೆ ಯಾವುದೇ ನಡೆಗಲು ಇದ್ದರೆ ತಪ್ಪಿಸಿಕೊಡಲಾಗುದು ಹಾಗೂ ನಿಮ್ಮ ಸಮಸ್ಯೆಗಳಿಗೆ ಪ್ರತಿ ಶನಿವಾರ ದೇವಿಯ ದರ್ಶನ ಬರುವುದರೊಂದಿಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುವುದು. ಇಂದೇ ಸಂಪರ್ಕಿಸಿ: 7848019996, ಶ್ರೀ ಮಂಜುನಾಥ ಭವಿಷ್ಯ ಕೇಂದ್ರ, ದುರ್ಗಾ ಚಾಮುಂಡೇಶ್ವರಿ ನಾಗಮಾಸ್ತಿ ಆರಾಧಕ , ಅಶೋಕ ನಾಯ್ಕ ಜನತಾ ವಿದ್ಯಾಲಯ ಇದುರಿನ ರಸ್ತೆ ಗುಡ್ಡಹಿತ್ಲು ಶಿರಾಲಿ, ಭಟ್ಕಳ

ವಿಸ್ಮಯ ನ್ಯೂಸ್, ಹೊನ್ನಾವರ

Back to top button