Uttara Kannada
Trending

ಅಂಕೋಲಾದ ನೂತನ ಪಿಎಸೈ ಆಗಿ ಪ್ರವೀಣ ಕುಮಾರ ಅಧಿಕಾರ ಸ್ವೀಕಾರ| ಜಿಲ್ಲೆಯ ಇತರೆಡೆ ಸೇವೆ ಸಲ್ಲಿಸಿ ಅನುಭವವಿರುವ ಯುವ ಅಧಿಕಾರಿ.

ಅಂಕೋಲಾ: ತಾಲೂಕಿನ ನೂತನ ಪಿ.ಎಸೈ ಆಗಿ ಪ್ರವೀಣ ಕುಮಾರ ಆರ್ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಅಂಕೋಲಾದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿ. ಎ ಸೈ ಈ ಸಿ ಸಂಪತ್ತರವರನ್ನು ಕಾರವಾರ ತಾಲೂಕಿನ ಚಿತ್ತಾಕುಲ ಠಾಣೆಗೆ, ಹಾಗೂ ಚಿತ್ತಾಕುಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ ಅವರು ಅಂಕೋಲಾ ಠಾಣೆಗೆ (ಅದಲು- ಬದಲು ) ವರ್ಗಾವಣೆ ಪಟ್ಟಿಯಲ್ಲಿದ್ದರು.ಇಲಾಖೆಯ ಅದೇಶದಂತೆ ಇಬ್ಬರೂ ಅಧಿಕಾರಿಗಳು ತಮ್ಮ ಸ್ಥಾನಗಳಿಗೆ ಹಾಜರಾಗಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಾಗಿರುವ ಪ್ರವೀಣ ಕುಮಾರ್ ಆರ್ 40ನೇ ಬ್ಯಾಚಿನ ಅಧಿಕಾರಿಯಾಗಿದ್ದು, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ದಾಂಡೇಲಿ, ಮಂಡಗೋಡ ಗಳಲ್ಲಿ ಈ ಹಿಂದೆ ಸೇವೆ ಸಲ್ಲಿಸಿ, ನಂತರ 2018 ರಿಂದೀಚೆಗೆ ಕಾರವಾರದ ಚಿತ್ರಾಕುಲ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಜಿಲ್ಲೆಯ ವಿವಿಧೆಡೆ ಸುಮಾರು 6 ವರ್ಷಗಳ ಕಾಲ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಇವರು ಕರ್ನಾಟಕದ ಬಾರ್ಡೋಲಿ ಎನಿಸಿದ ಅಂಕೋಲಾದಲ್ಲೂ ಸೇವೆ ಸಲ್ಲಿಸುವ ಅವಕಾಶ ಓದಗಿ ಬಂದದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದು, ಜಿಲ್ಲೆಯ ಜನರ ಪ್ರಜ್ಞಾವಂತಿಕೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಜನಪ್ರತಿನಿಧಿಗಳು ಮತ್ತಿತರರ ಸಹಕಾರ ಸ್ಮರಿಸಿ ಕೊಳ್ಳುತ್ತಾರೆ.

ಯುವ ಅಧಿಕಾರಿ ಪ್ರವೀಣ ಕುಮಾರ ತನ್ನ ಸೇವೆ ಮತ್ತು ಕರ್ತವ್ಯದ ಮೂಲಕ ಇನ್ನಷ್ಟು ಬೆಳೆಯಲಿ ಹಾಗೂ ಇಲಾಖೆ ಹಾಗೂ ತಾಲೂಕಿನ ಗೌರವ ಹೆಚ್ಚಿಸುವಂತಾಗಲಿ ಎನ್ನುವುದು ಅಂಕೋಲಿಗರ ಶುಭಹಾರೈಕೆ ಆಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button